ಕಲಬುರಗಿ: ವಿಧಾನಸಭೆ ವಿರೋಧ ಪಕ್ಷದ ನಾಯಕನಾದ ನಂತ್ರ ಫುಲ್ ಆಕ್ಟೀವ್ ಆಗಿರುವ ಸಾಮ್ರಾಟ್ ಆರ್ ಅಶೋಕ್ ಇಂದಿನಿಂದ ಬರ ಅಧ್ಯಯನ ಶುರು ಮಾಡಿದ್ದಾರೆ.
Advertisement
ಅದ್ರಲ್ಲೂ ಕಲಬುರಗಿಯಿಂದಲೇ ಬರ ಅಧ್ಯಯನ ಆರಂಭ ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ. ಗ್ರಾಮೀಣ ಮತಕ್ಷೇತ್ರದ ಮೊಕಿನ್ ತಾಂಡಾದ ರೈತರ ಹೊಲಗಳಿಗೆ ಭೇಟಿ ಕೊಟ್ರು.
ಇದೇವೇಳೆ ರೈತರಿಂದ ಮಾಹಿತಿ ಪಡೆದು ಹಾನಿಯಾದ ವಿವರ ಪಡೆದು ನಂತ್ರ ಅಳಂದ ತಾಲೂಕಿನ ಕಡಗಂಚಿಯ ಗ್ರಾಮದ ರೈತರೊಡನೆ ಚರ್ಚಿಸಿದ್ರು.