ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶನಿವಾರ ಸೆ. 19ರಿಂದ ಐಪಿಎಲ್-20-20 ಆರಂಭವಾಗಲಿದೆ. ರಾಜ್ಯ ತಂಡಗಳ ನಡುವೆ ನಡೆಯುವ ಸೈಯ್ಯದ ಮುಷ್ತಾಕ್ ಟ್ವೆಂಟಿ-20 ಚಾಂಪಿಯನ್ಶಿಪ್ನಲ್ಲಿ ಸತತ ಎರಡು ಸಲ ಚಾಂಪಿಯನ್ ಆಗಿರುವ ಕರ್ನಾಟಕ ತಂಡದ ಹಲವಾರು ಆಟಗಾರರು ಈಗ ಐಪಿಎಲ್-20-20 ಚಾಂಪಿಯನ್ಶಿಪ್ನಲ್ಲಿ ವಿವಿಧ ತಂಡಗಳ ಪರ ಆಡಲಿದ್ದಾರೆ.
ಇಲ್ಲಿ ಎರಡು ತಂಡಗಳ ವಿಷಯ ನೋಡಿ. ಪಂಚಾಬ್ ಎಲೆವೆನ್ ತಂಡದಲ್ಲಿ ಐವರು ಕನ್ನಡಿಗರು! ತಂಡದ ಕೋಚ್ ಅನಿಲ್ ಕುಂಬ್ಳೆ, ಕ್ಯಾಪ್ಟನ್ ಕೆ.ಎಲ್. ರಾಹುಲ್ ಜೊತೆಗೆ ಭಾರತ ತಂಡದಲ್ಲಿ ಆಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರುಣ್ ನಾಯರ್, ಆಲ್ರೌಂಡರ್ಗಳಾದ ಕೆ. ಗೌತಮ್ ಮತ್ತು ಜೆ. ಸುಚಿತ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.
ರಾಜಸ್ತಾನ್ ರಾಯಲ್ಸ್ ನಲ್ಲಿ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಮತ್ತು ಗದಗಿನ ಹುಡುಗ ಅನಿರುದ್ಧ ಜೋಶಿ ಇದ್ದಾರೆ.