ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್‌ ಎಂಬ ಕ್ರೈಸ್ತ ಮಾಡಿದ್ದಾನೆ: ಪ್ರತಾಪ್‌ ಸಿಂಹ

0
Spread the love

ಮೈಸೂರು: ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್‌ ಮೋಹನ್‌ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ. ತಿರುಪತಿ ಲಡ್ಡು ವಿವಾದ ಕುರಿತು ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಒಂದು ರಾಜ್ಯ ಮುಸಲ್ಮಾನರ ಕೈಗೆ ಹೋದ ಕೂಡಲೇ ಅಲ್ಲಿರುವಂತಹ ಕಾಶ್ಮೀರಿ ಪಂಡಿತರನ್ನು ಸಾರಾಸಗಟಾಗಿ ಆಚೆ ದಬ್ಬಿದರು.

Advertisement

ಆಂಧ್ರಪ್ರದೇಶ ರಾಜ್ಯ ಕ್ರೈಸ್ತನ ಕೈಗೆ ಸಿಕ್ಕಿತು. ಪವಿತ್ರವಾದ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್‌ ಮೋಹನ್‌ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ. ಇನ್ನಾದರೂ ಹಿಂದೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here