HomeEntertainmentಡ್ರೀಮ್ ಗರ್ಲ್ ಬದುಕಿನ ಕತ್ತಲು ಅಧ್ಯಾಯ: ಹೇಮಾ ಮಾಲಿನಿ ಹೇಳಿದ ದೆವ್ವದ ಮನೆಯ ಭಯಾನಕ ಕಥೆ

ಡ್ರೀಮ್ ಗರ್ಲ್ ಬದುಕಿನ ಕತ್ತಲು ಅಧ್ಯಾಯ: ಹೇಮಾ ಮಾಲಿನಿ ಹೇಳಿದ ದೆವ್ವದ ಮನೆಯ ಭಯಾನಕ ಕಥೆ

For Dai;y Updates Join Our whatsapp Group

Spread the love

1980ರಲ್ಲಿ ಧರ್ಮೇಂದ್ರ ಅವರನ್ನು ವಿವಾಹವಾದ ನಂತರ, ಹೇಮಾ ಮಾಲಿನಿ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದರು. ಇತ್ತೀಚೆಗೆ ಧರ್ಮೇಂದ್ರ ನಿಧನರಾದ ಬಳಿಕ, ಅವರ ಜೀವನದ ಕೆಲವು ಮರೆಮಾಚಿದ ನೆನಪುಗಳು ಮತ್ತೆ ಚರ್ಚೆಗೆ ಬಂದಿವೆ. ಅದರಲ್ಲಿ ಒಂದು ದೆವ್ವದ ಬಂಗಲೆಯ ಭಯಾನಕ ಅನುಭವ.

ಹೇಮಾ ಮಾಲಿನಿ ತಮ್ಮ ಆತ್ಮಕಥೆ ‘ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್’ ಪುಸ್ತಕದಲ್ಲಿ ಈ ಅನುಭವವನ್ನು ವಿವರವಾಗಿ ಬರೆದಿದ್ದಾರೆ. ಚೆನ್ನೈ ಮತ್ತು ದೆಹಲಿಯಲ್ಲಿ ಬೆಳೆದ ಅವರು, ಹಸಿರಿನಿಂದ ತುಂಬಿದ ಬಂಗಲೆಯಲ್ಲಿ ವಾಸಿಸುವುದನ್ನು ಬಹಳ ಇಷ್ಟಪಡುತ್ತಿದ್ದರು. ಮುಂಬೈಗೆ ಬಂದ ಬಳಿಕ ಫ್ಲಾಟ್ ಜೀವನಕ್ಕೆ ಹೊಂದಿಕೊಂಡರೂ, ಮನಸ್ಸಿನಲ್ಲಿ ಬಂಗಲೆ ಕನಸು ಜೀವಂತವಾಗಿಯೇ ಇತ್ತು.

ಒಮ್ಮೆ ಅವರ ತಂದೆ ಅವರನ್ನು ದಕ್ಷಿಣ ಮುಂಬೈನ ವಾಲ್ಕೇಶ್ವರಕ್ಕೆ ಕರೆದುಕೊಂಡು ಹೋಗಿದರು. ಸಮುದ್ರದ ಎದುರಿನ ಅಪಾರ್ಟ್ಮೆಂಟ್ ಅನ್ನು ಅವರು ಹೇಮಾ ಮಾಲಿನಿಗಾಗಿ ಖರೀದಿಸಿದರು. ಆದರೆ ದಕ್ಷಿಣ ಮುಂಬೈನಲ್ಲಿ ವಾಸಿಸುವುದು ಇಷ್ಟವಿಲ್ಲ, ಮರಗಳಿಂದ ಆವೃತವಾದ ಮನೆ ಬೇಕು ಎಂದು ಅವರು ತಂದೆಗೆ ತಿಳಿಸಿದರು. ಇದಾದ ನಂತರ ಜುಹುವಿನಲ್ಲಿ ಬಂಗಲೆಯನ್ನು ಹುಡುಕುವ ಕಾರ್ಯ ಆರಂಭವಾಯಿತು.

ಆ ದಿನಗಳಲ್ಲಿ ಹೇಮಾ ಮಾಲಿನಿ ರಾಜ್ ಕಪೂರ್ ಅವರೊಂದಿಗೆ ತಮ್ಮ ಮೊದಲ ಸಿನಿಮಾ ‘ಸಪ್ನೋ ಕಾ ಸೌದಾಗರ್’ ಚಿತ್ರೀಕರಣದಲ್ಲಿದ್ದರು. ಬಾಂದ್ರಾದಲ್ಲಿದ್ದ ಸಣ್ಣ ಅಪಾರ್ಟ್ಮೆಂಟ್‌ನಿಂದ ಬಂಗಲೆಗೆ ಸ್ಥಳಾಂತರಗೊಂಡ ನಂತರ, ಅವರ ಜೀವನದಲ್ಲಿ ವಿಚಿತ್ರ ತಿರುವು ಕಂಡಿತು.

ಪ್ರತಿ ರಾತ್ರಿ ಯಾರೋ ಕತ್ತು ಹಿಸುಕುತ್ತಿರುವ ಅನುಭವ, ಉಸಿರಾಡಲು ಆಗದ ಸ್ಥಿತಿ ಅವರನ್ನು ಕಾಡತೊಡಗಿತು. ಭಯದಿಂದ ಅವರು ತಾಯಿಯ ಪಕ್ಕದಲ್ಲೇ ಮಲಗುತ್ತಿದ್ದರು. ಇದು ಒಂದೆರಡು ದಿನಗಳ ವಿಷಯವಲ್ಲ, ಪ್ರತಿದಿನ ನಡೆಯುತ್ತಿದ್ದ ಕಾರಣ ಆತಂಕ ಹೆಚ್ಚಾಯಿತು. ಈ ಭಯಾನಕ ಅನುಭವವೇ ಹೇಮಾ ಮಾಲಿನಿ ಬದುಕಿನ ಒಂದು ಕತ್ತಲು ಅಧ್ಯಾಯವಾಗಿ ಉಳಿದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!