ಬೆಂಗಳೂರು:- ಮನೆ ಮುಂದೆ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವೈದ್ಯೆಗೆ ಅವಾಚ್ಯವಾಗಿ ನಿಂದಿಸಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಜೂನ್ 5ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯೆ ಆಶಾ ಅವರ ಮನೆ ಮುಂದೆ ಆರೋಪಿ ರಘು ಕಾರು ನಿಲ್ಲಿಸಿದ್ದ. ಕಾರು ನಿಲ್ಲಿಸಿದ್ದರಿಂದ ಆಶಾ ಮನೆಯವರಿಗೆ ಓಡಾಡಲು ತೊಂದರೆ ಆಗಿದೆ. ಹೀಗಾಗಿ ರಘು ಬಳಿ ಪ್ರಶ್ನಿಸಿದಾಗ ವೈದ್ಯೆ ತಳ್ಳಿ ಗಲಾಟೆ ಮಾಡಿದ್ದಾನೆ. ಕೂಡಲೇ ಸೂರ್ಯ ಎಂಬಾತ ವೈದ್ಯೆ ಬೀಳುವುದನ್ನ ತಪ್ಪಿಸುತ್ತಾರೆ. ಆಗ ರಘು ಸಹಾಯ ಮಾಡಿದ್ದ ಸೂರ್ಯನನ್ನು ತಳ್ಳಿ ನಿಂದಿಸಿದ್ದಾನೆ. ರಘು ಹಾಗೂ ಆತನ ಕುಟುಂಬಸ್ಥರು ವೈದ್ಯೆ ಆಶಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ವೈದ್ಯ ಆಶಾ ನೀಡಿದ ದೂರಿನ ಅನ್ವಯ ಚಂದ್ರಲೇಔಟ್ ಠಾಣೆಯಲ್ಲಿ ರಘು ಹಾಗೂ ಆತನ ಸಹೋದರ ಮತ್ತು ಅಪ್ಪ ಅಮ್ಮ ವಿರುದ್ಧ ದೂರು ದಾಖಲಾಗಿದೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.