ಬೆಂಗಳೂರು:- ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ನಡೆದು ಮಚ್ಚಾ ಎಂದು ಕರೆದ ಸ್ನೇಹಿತನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿ ಬಳಿ ಮಾರ್ಚ್ 14 ರ ರಾತ್ರಿ ಜರುಗಿದೆ.
ಗಾಯಗೊಂಡ ವ್ಯಕ್ತಿಯನ್ನು ಕೀರ್ತಿಕುಮಾರ್ ಎಂದು ಗುರುತಿಸಲಾಗಿದ್ದು, ಸುನೀಲ್, ಗಣೇಶ್ ಎಂಬುವವರಿಂದ ಚಾಕು ಇರಿಯಲಾಗಿದೆ. ಮೊದಲು ಮಧು, ಮಹೇಶ್ ಎಂಬುವವರು ವೈನ್ಸ್ ಸ್ಟೋರ್ ನಲ್ಲಿ ಗಲಾಟೆ ಮಾಡಿಕೊಂಡಿದ್ರು. ಇವ್ರಿಬ್ರು ಸದ್ಯ ಗಾಯಗೊಂಡಿರೊ ಕೀರ್ತಿ ಸ್ನೇಹಿತರು ಎನ್ನಲಾಗಿದೆ. ಗಲಾಟೆ ರಾಜಿ ಮಾಡಲು ಸಹಚರರು ಒಟ್ಟಿಗೆ ಸೇರಿದ್ದರು. ಭೀಮೇಶ್ ಎಂಬಾತ ಇಬ್ಬರ ಮಧ್ಯೆ ರಾಜಿ ಮಾಡಲು ಹೋಗಿದ್ದ. ಭೀಮೇಶ್ ಬಳಿ ಕೀರ್ತಿ,ಮಧು,ಮಹೇಶ್ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಸುನೀಲ್ ಕುಡಿದು ಬೈಕ್ ನಲ್ಲಿ ಮನೆ ಕಡೆಗೆ ತೆರಳ್ತಿದ್ದ. ಜನರ ಗುಂಪು ನೋಡಿ ಸುನೀಲ್, ಬೈಕ್ ನಿಲ್ಲಿಸಿದ್ದ. ಈ ವೇಳೆ ಸುನೀಲ್ ನನ್ನ ಕೀರ್ತಿ ನೋಡಿದ್ದ. ಏನೋ ಗಾಡಿ ನಿಲ್ಸಿದ್ದಿಯಾ ನಡಿಯೊ ‘ಮಚ್ಚಾ’ ಎಂದು ನಿಂದನೆ ಮಾಡಿದ್ದಾನೆ. ನನ್ನನ್ನೇ ಮಚ್ಚಾ ಎಂದು ಕರೆಯುತ್ತೀಯಾ ಎಂದು ಸುನೀಲ್ ಆವಾಜ್ ಹಾಕಿದ್ದಾನೆ. ಮನೆಗೆ ತೆರಳಿ ಭಾಮೈದ ಗಣೇಶ್ ನನ್ನ ಕರೆತಂದು ಹಲ್ಲೆ ಮಾಡಿದ್ದಾನೆ. ಭಾವ ಸುನೀಲ್ ,ಭಾಮೈದ ಗಣೇಶ್ ಇಬ್ಬರು ಸೇರಿ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧ ಸುನೀಲ್ ಹಾಗೂ ಗಣೇಶ್ ಇಬ್ಬರ ಬಂಧಿಸಿ ಚಿಕಿತ್ಸೆ ಕೈಗೊಳ್ಳಲಾಗಿದೆ.