HomeKarnataka Newsಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

For Dai;y Updates Join Our whatsapp Group

Spread the love

ಬೆಂಗಳೂರು: ಆರೋಗ್ಯಕರ ಕುಟುಂಬಗಳು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುತ್ತವೆ. ಆರೋಗ್ಯಕರ ರಾಷ್ಟ್ರವು ಶಕ್ತಿಶಾಲಿ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಮಹಿಳಾ ಮಾನಸಿಕ ಆರೋಗ್ಯ ಶೃಂಗಸಭೆಯನ್ನು (Mpowering Minds 2026, women’s Mental health summit) ಉದ್ಘಾಟಿಸಿ ಮಾತನಾಡಿದ ಸಚಿವರು, ಆರೋಗ್ಯಕರ ಮಹಿಳೆಯರು ಆರೋಗ್ಯಕರ ಕುಟುಂಬಗಳನ್ನು ನಿರ್ಮಿಸುತ್ತಾರೆ ಎಂದರು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ Mpower ಸಂಸ್ಥೆಗೆ ಹೃತ್ಪೂರ್ವಕ ಅಭಿನಂದನೆಗಳು. ನಾವು ಇಂದು ಇರುವ ಬೆಂಗಳೂರು, ಆಲೋಚನೆಗಳ, ಹೊಸತನದ ಮತ್ತು ವಿಭಿನ್ನವಾಗಿ ಯೋಚಿಸುವ ಧೈರ್ಯದ ನಗರ. ಮಹಿಳೆಯರ ಮಾನಸಿಕ ಆರೋಗ್ಯಕ್ಕೂ ಇಂದು ಇದೇ ಬೇಕಾಗಿದೆ, ಮಾತನಾಡುವ ಧೈರ್ಯ, ಕೇಳುವ ಧೈರ್ಯ ಮತ್ತು ಕಾರ್ಯಗತಗೊಳಿಸುವ ಧೈರ್ಯ.
ಮಾನಸಿಕ ಆರೋಗ್ಯ ನಿರ್ಲಕ್ಷಿಸುವ ವಿಷಯವಲ್ಲ, ಅದು ಜೀವನದ ವಿಷಯ ಎಂದು ಹೇಳಿದರು. ‌

ಮಹಿಳೆಯರು ಕುಟುಂಬಗಳ, ಸಮುದಾಯಗಳ ಮತ್ತು ಉದ್ಯೋಗ ಕ್ಷೇತ್ರಗಳ ಬೆನ್ನೆಲುಬು. ಆದರೆ ಅವರ ಬಲದ ಹಿಂದೆ ಒಂದು ಮೌನ ಭಾರ ಇರುತ್ತದೆ , ಭಾವನಾತ್ಮಕ ಹೊರೆ, ಜವಾಬ್ದಾರಿಗಳು, ನಿರೀಕ್ಷೆಗಳು, ತ್ಯಾಗಗಳು. ಹಲವಾರು ನಗುಮುಖಗಳ ಹಿಂದೆ ಒತ್ತಡ ಅಡಗಿರುತ್ತದೆ. ಹಲವಾರು ಬಲಿಷ್ಠ ಮಹಿಳೆಯರು ಕಾಣದ ಹೋರಾಟಗಳನ್ನು ಹೊರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾಭ್ಯಾಸದ ಒತ್ತಡ ಎದುರಿಸುವ ಬಾಲಕಿಯಿಂದ ಹಿಡಿದು ಕೆಲಸ ಮತ್ತು ಮನೆ ಎರಡನ್ನೂ ಸಮತೋಲನಗೊಳಿಸುವ ಮಹಿಳೆಯವರೆಗೆ ಜೀವನ ಬದಲಾವಣೆಗಳನ್ನು ಎದುರಿಸುವ ತಾಯಿಯಿಂದ…ಏಕಾಂತವನ್ನು ಅನುಭವಿಸುವ ವೃದ್ಧೆಯವರೆಗೆ ಪ್ರತಿ ಹಂತವೂ ಹೊಸ ಸವಾಲುಗಳನ್ನು ತರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಮ್ಮ ರಾಜ್ಯದಲ್ಲಿ ಸಾವಿರಾರು ಮಹಿಳೆಯರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇವು ಕೇವಲ ಅಂಕಿ ಅಂಶಗಳಲ್ಲ… ಇವು ಜೀವಗಳು, ಕುಟುಂಬಗಳು, ಭವಿಷ್ಯಗಳು. ಇದನ್ನು ಒಂದೇ ಸಂಸ್ಥೆ ಪರಿಹರಿಸಲು ಸಾಧ್ಯವಿಲ್ಲ. ಒಂದು ಮನಸ್ಸನ್ನು ಬೆಂಬಲಿಸಲು ಒಂದು ಸಮಾಜ ಬೇಕು. ಸರ್ಕಾರಕ್ಕೆ ಜವಾಬ್ದಾರಿ ಇದೆ. ಸಂಸ್ಥೆಗಳಿಗೆ ಜವಾಬ್ದಾರಿ ಇದೆ. ಸಮುದಾಯಗಳಿಗೆ ಜವಾಬ್ದಾರಿ ಇದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!