ಶಿಕ್ಷಕರ ಋಣವನ್ನು ತೀರಿಸಲಾಗದು : ಬಸವರಾಜ ಹೊರಟ್ಟಿ

0
A heartwarming tribute to the departed Chairman Basavaraja Horatti
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಾನು ಇಂದು ಏನೇ ಆಗಿದ್ದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಅದಕ್ಕೆ ಕಾರಣ ನನ್ನ ಹೆತ್ತ ತಾಯಿಯ ತ್ಯಾಗ ಮತ್ತು ನಾಲ್ಕು ದಶಕಗಳಿಂದ ಮತ ಹಾಕಿದ ಶಿಕ್ಷಕರ ವಿಶ್ವಾಸ ಹಾಗೂ ಪ್ರೀತಿ. ಹೀಗಾಗಿ ಅವರ ಋಣವನ್ನು ಎಂದಿಗೂ ತೀರಿಸಲಾಗದು ಎಂದು ಸಭಾಪತಿ ಬಸವರಾಜ ಹೊರಟ್ಟಿ ನುಡಿದರು.

Advertisement

ಅವರು ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಂಪರ್ಕ ಇಲಾಖೆ, ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಅವ್ವ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಅವ್ವ ಸೇವಾ ಟ್ರಸ್ಟ್ ಹಾಗೂ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಸ್ಮರಣಾರ್ಥ ನೀಡುವ ಮಾಧ್ಯಮ ಚೇತನ ಪ್ರಶಸ್ತಿ ಸಮಾರಂಭದಲ್ಲಿ 44 ವರ್ಷಗಳ ತಮ್ಮ ಸಂಸದೀಯ ಪಯಣದ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ಒಬ್ಬ ಅಪರೂಪದ ರಾಜಕಾರಣಿ. ಶಿಕ್ಷಕರ ಪ್ರತಿನಿಧಿಯಾಗಿ 8 ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ ಏಕೈಕ ಕನ್ನಡಿಗ ಹೊರಟ್ಟಿಯವರು ಎಂದು ಹೇಳಲು ಹೆಮ್ಮೆ ಹಾಗೂ ಅಭಿಮಾನವೆನಿಸುತ್ತದೆ.

ಸಾರ್ವಜನಿಕ ಬದುಕಿನಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪ್ರಜ್ಞಾವಂತ ಶಿಕ್ಷಕರೊಂದಿಗಿನ ಪ್ರೀತಿಯನ್ನು ಹಾಗೂ ವಿಶ್ವಾಸವನ್ನು ಹೊರಟ್ಟಿಯವರು ಎಂದಿಗೂ ಕಡಿಮೆ ಆಗದ ಹಾಗೆ ನೋಡಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ನಿರಂತರ ಶ್ರಮ, ಹೋರಾಟ, ಜೊತೆಗೆ ಅವರ ನೇರ ನಡೆ-ನುಡಿ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿದೆ ಎಂದರು.

ಈ ಸಂದರ್ಭದಲ್ಲಿ ಅವ್ವ ಸೇವಾ ಟ್ರಸ್ಟ ದತ್ತಿನಿಧಿ ಪ್ರಶಸ್ತಿಗೆ ಪಾತ್ರರಾದ ಹಿರಿಯ ಪತ್ರಕರ್ತೆ ಕೆ.ಎಚ್.ಸಾವಿತ್ರಿಯವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಮತ್ತು ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ.ಬಸವರಾಜ ಧಾರವಾಡ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ರಾಜು ಹೆಬ್ಬಳ್ಳಿ, ಸೈಯದ ಸನಾವುಲ್ಲಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಬಾಗಾಧಿಕಾರಿ ಗಂಗಪ್ಪ ಎಂ. ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಜಿಲ್ಲೆಯ ವಿವಿಧ ಪತ್ರಕರ್ತರು, ಗಣ್ಯಮಾನ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ಆನಂದಯ್ಯ ಹಿರೇಮಠ ನಿರೂಪಿಸಿದರು. ಮೌನೇಶ ಬಡಿಗೇರ ವಂದಿಸಿದರು.

ಒಬ್ಬ ಸಾಮಾನ್ಯ ಶಿಕ್ಷಕನಾದ ನನ್ನನ್ನು ಹಲವಾರು ಖಾತೆಯ ಸಚಿವನಾಗಿ, ಮೂರು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ನನ್ನ ತಾಯಿಯ ಪೂಜೆ, ಹಾರೈಕೆ, ತ್ಯಾಗದ ಫಲದಿಂದ ಇವೆಲ್ಲ ಸಾಧ್ಯವಾಗಿದೆ. ಜೊತೆಗೆ ಎಂಟು ಬಾರಿ ನನಗೆ ಮತ ಹಾಕಿ ಐತಿಹಾಸಿಕ ದಾಖಲೆಗೆ ಕಾರಣೀಕರ್ತರಾದವರು ಶಿಕ್ಷಕರು. ಎಷ್ಟೋ ಬಾರಿ ನಾನು ನಂಬಿದ ಅನೇಕರು ನನಗೆ ಕೈಕೊಟ್ಟರೂ ಶಿಕ್ಷಕರೆಂದೂ ನನ್ನನ್ನು ಕೈ ಬಿಟ್ಟಿಲ್ಲ. ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಇಂದು ಸರ್ಕಾರ ವಿವಿಧ ಇಲಾಖೆಗಳು ಗದುಗಿನ ಹಿತೈಷಿಗಳು ನನ್ನನ್ನು ಅತ್ಯಂತ ಪ್ರೀತಿಯಿಂದ ಗೌರವಿಸಿದ್ದನ್ನು ನನ್ನ ಜೀವನದಲ್ಲಿ ಸದಾಕಾಲ ನೆನಪಿಟ್ಟುಕೊಳ್ಳುವಂತಹ ಶುಭ ದಿನವಾಗಿದೆ ಎಂದು ಬಸವರಾಜ ಹೊರಟ್ಟಿ ನುಡಿದರು.


Spread the love

LEAVE A REPLY

Please enter your comment!
Please enter your name here