ನವದೆಹಲಿ:- ಪೊಲೀಸ್ ವಾಹನ ಹರಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೆಹಲಿಯ ರಾಮಕೃಷ್ಣ ಆಶ್ರಮ ಮಾರ್ಗ ಮೆಟ್ರೋ ನಿಲ್ದಾಣದ ಬಳಿ ಜರುಗಿದೆ.
Advertisement
ಮೃತ ವ್ಯಕ್ತಿಯ ಹೆಸರು ಗಂಗಾ ರಾಮ್ ಎಂದು ಹೇಳಲಾಗಿದ್ದು, ಅವರು ಚಹಾ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ. ಈ ಘಟನೆ ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ಪಿಸಿಆರ್ ವ್ಯಾನ್ ಚಾಲಕ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ವಾಹನವು ರಸ್ತೆಬದಿಯ ರ್ಯಾಂಪ್ ಹತ್ತಿ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಈ ದುರಂತ ಸಂಭವಿಸಿದೆ.
ಪೊಲೀಸರು ಮದ್ಯದ ಅಮಲಿನಲ್ಲಿದ್ದರೆಂದು ಮೃತ ಕುಟುಂಬದವರು ಆರೋಪಿಸಿದ್ದಾರೆ.