ತಮಿಳುನಾಡು ಮೂಲದ ವ್ಯಕ್ತಿ ಬೆಂಗಳೂರಿನ ಶಾಲೆ ಕಟ್ಟಡದಲ್ಲಿ ಆತ್ಮಹತ್ಯೆ..!

0
Spread the love

ಬೆಂಗಳೂರು: ತಮಿಳುನಾಡು ಮೂಲದ ವ್ಯಕ್ತಿ ಬೆಂಗಳೂರಿನ ಶಾಲೆ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿಯ ಸೆಂಟ್ ಜೇಮ್ಸ್ ಕಾಲೇಜು ಕಟ್ಟಡದಲ್ಲಿ ನಡೆದಿದೆ. ರಾಜೇಂದ್ರ(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ತಮಿಳುನಾಡು ಮೂಲದ ರಾಜೇಂದ್ರ ಬೆಂಗಳೂರಲ್ಲಿ ವಾಸವಾಗಿದ್ದರು.

Advertisement

ಸೆಂಟ್ ಜೇಮ್ಸ್ ಶಾಲೆಯಲ್ಲಿ ಕಟ್ಟಡ ಕಾಮಗಾರಿ ನಡಿಯುತ್ತಿತ್ತು. ಕಾಮಗಾರಿಗೆ ಎಂದು ಬಂದಿದ್ದ ರಾಜೇಂದ್ರ ಕೆಲಸ ಮಾಡಿ ಶಾಲೆಯ ಕಟ್ಟಡದಲ್ಲಿ ಮಲಗುತ್ತಿದ್ದರು. ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಶಾಲೆಗೆ ಮಕ್ಕಳು ಬಂದಾಗ ವಿಚಾರ ಬೆಳಕಿಗೆ ಬಂದಿದೆ.

ಶಾಲೆ ಒಳಗೆ ಹೋಗ್ತಿದ್ದಂತೆ ಮೃತದೇಹ ನೋಡಿ ಮಕ್ಕಳು ಚೀರಿಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here