ಶ್ರೀನಗರ: ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಹಂತ ಬಂದಿದೆ. ಇದರ ಶ್ರೇಯಸ್ಸು ಇಲ್ಲಿನ ಯುವಕರಿಗೆ ಮಾತ್ರ ಸಲ್ಲುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆ ದೋಡಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಹಂತ ಬಂದಿದೆ. ಇದರ ಶ್ರೇಯಸ್ಸು ಇಲ್ಲಿನ ಯುವಕರಿಗೆ ಮಾತ್ರ ಸಲ್ಲುತ್ತದೆ. ಇಂದು ನಾನು ಜಮ್ಮು ಮತ್ತು ಕಾಶ್ಮೀರದ ಯುವಕರು, ಅದು ಗಂಡಾಗಿರಲಿ, ಹೆಣ್ಣಮಕ್ಕಳಾಗಿರಲಿ ಅವರ ಉತ್ಸಾಹವನ್ನು ಅಭಿನಂದಿಸುತ್ತೇನೆ ಎಂದರು.
2000ದ ಬಳಿಕ ಇಲ್ಲಿ ಪಂಚಾಯ್ತಿ ಚುನಾವಣೆ ನಡೆದಿಲ್ಲ. ಬಿಡಿಸಿ ಚುನಾವಣೆಗಳು ಇಲ್ಲಿ ನಡೆದಿಲ್ಲ. ದಶಕಗಳಿಂದ ಸ್ವಜನಪಕ್ಷಪಾತವು ಇಲ್ಲಿನ ಮಕ್ಕಳು ಮತ್ತು ಭರವಸೆಯ ಯುವಕರನ್ನು ಮುಂದೆ ಬರಲು ಬಿಡಲಿಲ್ಲ. ಯುವಕರು ರಾಜಕೀಯಕ್ಕೆ ಬರುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. 2014ರಲ್ಲಿ ಬಿಜೆಪಿ ಸರ್ಕಾರಕ್ಕೆ ಬಂದ ನಂತರ,
ನಾನು ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಹೊಸ ನಾಯಕತ್ವವನ್ನು ತರಲು ಪ್ರಯತ್ನಿಸಿದೆ. ನಂತರ 2018ರಲ್ಲಿ ಪಂಚಾಯತ್ ಚುನಾವಣೆಗಳು ನಡೆದವು. 2019ರಲ್ಲಿ ಬಿಡಿಸಿ ಚುನಾವಣೆಗಳು ನಡೆದವು ಮತ್ತು 2020 ರಲ್ಲಿ ಮೊದಲ ಬಾರಿಗೆ ಡಿಡಿಸಿ ಚುನಾವಣೆಗಳು ನಡೆದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟದವರೆಗೆ ತಲುಪಲು ಈ ಚುನಾವಣೆಗಳನ್ನು ನಡೆಸಲಾಯಿತು ಎಂದು ಹೇಳಿದರು.