ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ವಿಷಯವನ್ನು ನಾವು ನೂರು ಶಬ್ದಗಳಲ್ಲಿ ಹೇಳಬೇಕಾದುದನ್ನು ಒಂದೇ ಒಂದು ಚಿತ್ರ ಎಲ್ಲವನ್ನೂ ನೋಡುಗನಿಗೆ ತಿಳಿಸುತ್ತದೆ. ಆದ್ದರಿಂದ ನೀವು ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಳ್ಳಿ ಎಂದು ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಹೇಳಿದರು.
ಪಟ್ಟಣದ ಎಸ್.ಎ.ವಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳು ಪ್ರದರ್ಶಿಸಿದ ಪರಿಸರದ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ಬಗ್ಗೆ ನಿಮಗಿರುವ ಕಾಳಜಿಯನ್ನು ಈ ಚಿತ್ರಗಳು ತೋರಿಸುತ್ತವೆ. ನಿಮಗೆ ಓದಿ ಓದಿ ಬೇಸರವಾದಾಗ ನೀವು ವಿರಾಮಕ್ಕೆಂದು ಈ ಚಿತ್ರಗಳನ್ನು ಬಿಡಿಸುವ ರೂಢಿಯನ್ನು ಬೆಳೆಸಿಕೊಳ್ಳಿ. ಇದರಿಂದ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಬಹುದು. ನಿಮ್ಮ ಅಧ್ಯಯನಕ್ಕೆ ಪೂರಕವಾಗುವಂತೆ ಈ ಚಿತ್ರ ರಚನಾ ಕ್ರಿಯೆಯನ್ನು ಮುಂದುವರೆಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರಿ ಎಂದರು.
ಉತ್ತಮ ಚಿತ್ರಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಖ. ಯರಗೊಪ್ಪ, ಎಸ್.ಶಿವಮೂರ್ತಿ, ಶಿಕ್ಷಕಿಯರಾದ ಎಸ್.ಎಫ್. ಧರ್ಮಾಯತ, ಆರ್.ಎಸ್. ಗುಳಬಾಳ ಇತರರಿದ್ದರು.