ಕುಡಿವ ನೀರಿನ ಕೊಳವೆಯಲ್ಲಿ ಬಂತು ರಕ್ತದ ಜೊತೆ ಮಾಂಸದ ತುಣುಕು..! ಜನರಿಗೆ ಆತಂಕ

0
Spread the love

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ  ಶನಿವಾರ ಮೂರನೇ ವಾರ್ಡಿನಲ್ಲಿ ಕುಡಿಯುವ ನೀರಿನ ಕೊಳವೆಯಲ್ಲಿ ರಕ್ತ ಮತ್ತು ಮಾಂಸದ ತುಣಕು ಕಂಡುಬಂದಿದ್ದು  ಊರಿನ ಜನರು ಆಶ್ಚರ್ಯ ಪಡುವಂತಾಗಿದೆ. ತೆಕ್ಕಲಕೋಟೆಯ ಮೂರನೇ ವಾರ್ಡಿನ ಜಾಮಿಯಾ ಮಸೀದ್ ಹತ್ತಿರ ಇರುವ ವಠಾರದಲ್ಲಿ ಸಮಯ ಸುಮಾರು 8:00  ವೇಳೆಗೆ ಕುಡಿಯುವ ನೀರು ಸರಬರಾಜು ಮಾಡಲಿಕ್ಕೆ ಅಳವಡಿಸಿರುವ ಕೆಲವೊಂದು ಕೊಳವೆಯಲ್ಲಿ ರಕ್ತದ ನೀರು ಹಾಗೂ ಮಾಂಸದ ತುಣುಕುಗಳು ಕಂಡುಬಂದಿದ್ದು,

Advertisement

ಜನರು ಆಶ್ಚರ್ಯ ಚಕಿತರಾಗಿದ್ದು ಸುದ್ದಿ ತಿಳಿದ ನಂತರ ಸ್ಥಳಕ್ಕೆ ಭೇಟಿ ನೀಡಿದಾಗ ಕಾಜಾ ಸಾಬ್ ತಂದೆ ಅಹ್ಮದ್ ಸಾಬ್, ಕಾಜ ಹುಸೇನ್ ತಂದೆ ಹಮಾಜ್ ಸಾಬ್, ಮೈಬು ತಂದೆ ಶಾಮಿದ್ , ಹಾಗೂ ಅಕ್ಕಪಕ್ಕದ ಮನೆಗಳ  ಕೊಳೆವೆಯಲ್ಲಿ ನೀರಿನ ರಕ್ತದ ಕೋಡಿ ಹರಿದಿತ್ತು ಈ ವಠಾರಕ್ಕೆ ಅದೇ ವಾರ್ಡ್ ನಲ್ಲಿರುವ ನೀರಿನ ಸರಬರಾಜು ಒಂದರ ಟ್ಯಾಂಕನಲ್ಲಿ ವೀಕ್ಷಿಸಿದಾಗ,

ಯಾವುದೇ ರೀತಿಯಲ್ಲಿ ಸಂಶಯಾತ್ಮಕವಾಗಿ  ಕಂಡು  ಬಂದಿರುವುದಿಲ್ಲ, ನಂತರ ಪಟ್ಟಣ ಪಂಚಾಯಿತಿಯ  ಸಿ. ಓ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುವುದಾಗಿ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ  ಗಪೂರ್, ನಾಜಿಮ್,ಹುಸೇನ್, ರಜಾಕ್, ಮೈನುದ್ದಿನ್, ಖಾಜಾ ಮೊಬೈಲ್ ಶಾಪ್, ಶರೀಫ್, ಮಹಿಳೆಯರಾದ ಶಕೀನಾ,ಶಾಯಿನ್, ಶಮಿಮ್, ಶಂಶಾದ್ ಮತ್ತು ವಾರ್ಡಿನ ಕೆಲವು ಕುಟುಂಬ ಪರಿವಾರಗಳು ಮತ್ತಿತರರು  ಇದ್ದರು.


Spread the love

LEAVE A REPLY

Please enter your comment!
Please enter your name here