ಉಭಯ ಶ್ರೀಗಳ ಭಾವಚಿತ್ರ ಮೆರವಣಿಗೆ

0
A portrait procession of the two gentlemen
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳವರ 80ನೇ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೆಯ ಅಂಗವಾಗಿ ಜರುಗಿದ ಉಭಯ ಶ್ರೀಗಳ ಭಾವಚಿತ್ರ ಮೆರವಣಿಗೆಗೆ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ವಿರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್ನ ಸದಸ್ಯ ಪಿ.ಸಿ. ಹಿರೇಮಠ, ಹಿರಿಯರಾದ ಸಿದ್ದೇಶ್ವರ ಶಾಸ್ತಿçಗಳು ತೆಲ್ಲೂರ, ಮುರೇಗೆಪ್ಪ ಶೆಟ್ಟರ ಮುಂತಾದವರು ಇದ್ದರು.

ವಿರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ಮೆರವಣಿಗೆಯಲ್ಲಿ ದೇವರಹೊಸಪೇಟೆಯ ಶ್ರೀ ಸಿದ್ದರಾಮೇಶ್ವರ ಭಜನಾ ಸಂಘ, ಬಿಸರಳ್ಳಿಯ ಬ್ಯಾಂಡ್ ಕಂಪನಿ, ಬಂಟನೂರಿನ ಲೋಕಾಪೂರ ಶ್ರೀ ಬ್ರಹ್ಮಜಟ್ಟಿಂಗೇಶ್ವರ ಡೊಳ್ಳಿನ ಸಂಘ, ಮುಶಿಗೇರಿ ಶರಣಬಸವೇಶ್ವರ ಭಜನಾ ಸಂಘ, ಸವಡಿ ಸಂಗಮೇಶ್ವರ ಭಜನಾ ಸಂಘ ಮುಂತಾದ ವಾದ್ಯಮೇಳಗಳು, ಭಜನೆ, ಕರಡಿ ಮಜಲುಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಗಮ್ಮ ಹೂಲಿ ಅವರ ಮನೆ ತಲುಪಿ, ಅಲ್ಲಿಂದ ರಥೋತ್ಸವದ ಕಳಸ ಉತ್ಸವದೊಂದಿಗೆ ವಿರೇಶ್ವರ ಪುಣ್ಯಾಶ್ರಮಕ್ಕೆ ಮರಳಿತು.


Spread the love

LEAVE A REPLY

Please enter your comment!
Please enter your name here