ದಾಸರಹಳ್ಳಿ:- ಇತ್ತೀಚಿನ ದಿನಗಳಲ್ಲಿ ಕೆಲವು ದುಷ್ಕರ್ಮಿಗಳು ಸಣ್ಣ-ಪುಟ್ಟ ಯೂಟ್ಯೂಬ್ ಚಾನಲ್ ಇಟ್ಟುಕೊಂಡು ಪತ್ರಕರ್ತರ ಸೋಗಿನಲ್ಲಿ ಬಂದು ರೋಲ್ ಕಾಲ್ ಗೆ ಇಳಿದಿದ್ದಾರೆ. ಇಂತಹ ಎಷ್ಟೋ ಕೇಸ್ ಗಳಿಗೆ ಕಡಿವಾಣ ಬೀಳದೆ ಇರುವುದರಿಂದ ಸಾಕಷ್ಟು ಅಮಾಯಕರು ಇಂತವರಿಂದ ಸಿಲುಕಿ ಪರದಾಡುವಂತಾಗಿದೆ.
ಅದೇ ರೀತಿ ರಾಜಧಾನಿ ಬೆಂಗಳೂರಿನ ಚಿಕ್ಕಬಾಣಾವರದಲ್ಲಿ “ಗ್ಯಾರಂಟಿ” ಚಾನಲ್ ಹೆಸರು ಹೇಳಿಕೊಂಡು ರೋಲ್ ಕಾಲ್ ಗೆ ಇಳಿದು, ಪತ್ರಕರ್ತನ ಸೋಗಿನಲ್ಲಿ ಬಂದ ಕ್ಯಾಮೆರಾ ಮೆನ್ ಓರ್ವ, ಅಮಾಯಕ ಅಂಗವಿಕಲನಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ.
ಚಿಕ್ಕಬಾಣಾವಾರದ ಮೊಬ್ಯೆಲ್ ಅಂಗಡಿಗೆ ಟ್ರಿಮರ್ ಕೇಳಿಕೊಂಡು ಬಂದು ಅಂಗವಿಕಲನಾದ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾನೆ.
ಮೊಬೈಲ್ ಖರೀದಿಸಲು ಬಂದ ಇತರರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮನಬಂದತೆ ಮಾತನಾಡಿದ್ದು, ಅಲ್ಲದೇ ಹೊಡೆಯಲು ಕೂಡ ಮುಂದಾಗಿದ್ದಾನೆ.
ಅಂಗಡಿ ಮಾಲೀಕ ಜೀತೇಂದ್ರ ಕುಮಾರ್, ಅಂಗವಿಕಲನಾಗಿದ್ದು, ಚಿಕ್ಕಬಾಣಾವಾರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದಾನೆ. ಶ್ರೀ ರಾಮ ಎಲೆಕ್ಟ್ರಾನಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಬ ಸಣ್ಷ ಅಂಗಡಿ ನಡೆಸುತ್ತಿದ್ದಾರೆ. ಈತನ ಅಂಗಡಿಯಲ್ಲೇ ಪತ್ರಕರ್ತನ ಸೋಗಿನಲ್ಲಿ ಬಂದು ಕ್ಯಾಮೆರಾ ಮೆನ್ ಆಗಿ ಬಂದ ಯುವಕ ದುರ್ವರ್ತನೆ ತೋರಿದ್ದಾನೆ.
ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಕ್ಯಾಮೆರಾ ಮೆನ್ ಎಂದು ಹೇಳಿಕೊಳ್ಳುವ ಈ ಯುವಕ ಪತ್ರಕರ್ತನೇ ಅಲ್ಲ ಎಂದು ತಿಳಿದು ಬಂದಿದೆ. ಗ್ಯಾರಂಟಿ ವಾಹಿನಿಯಲ್ಲಿ ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ.
ಒಟ್ಟಾರೆ ಈ ರೀತಿ ಚಾನಲ್ ಹೆಸರು ಹೇಳಿಕೊಂಡು ರೋಲ್ ಕಾಲ್ ಇಳಿಯುತ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ.