3 ತಿಂಗಳ ಹಿಂದೆ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್! ವಿದೇಶದಿಂದಲೂ ಹರಿದು ಬಂದಿತ್ತಾ ಹಣ?

0
Spread the love

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ಮಾಸ್ಟರ್ ಪ್ಲಾನ್‌ಗಳು ಪೊಲೀಸರ ತನಿಖೆಯಲ್ಲಿ ಒಂದೊಂದಾಗೇ ಬಯಲಾಗುತ್ತಿದೆ. ಪಕ್ಕಾ ಪ್ಲಾನ್ ಪ್ರಕಾರವೇ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಮಾಡಲಾಗಿದೆ. ಮೇ 1ರಂದು ಸುಹಾಸ್ ಶೆಟ್ಟಿ ಹತ್ಯೆಗೆ 3 ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ.

Advertisement

ಇದರ ನಡುವೆ ಈ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹಿಂದೂಪರ ಕಾರ್ಯಕರ್ತನ ನೆತ್ತರು ಹರಿಸಲು ವಿದೇಶದಿಂದ ಹಣ ಹರಿದು ಬಂದಿತ್ತಾ ಎನ್ನುವ ಅನುಮಾನ ಕೂಡ ಮೂಡಿದೆ. ಸುಹಾಸ್​ ಕೊಲೆ ಮಾಡಲು 5 ಲಕ್ಷಕ್ಕೆ ಸುಪಾರಿ ನೀಡಿದ್ರು ಎನ್ನುವ ಮಾಹಿತಿ ತಿಳಿದುಬಂದಿದೆ.

ಪೊಲೀಸರು ಇದೀಗ ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಸುಹಾಸ್ ಶೆಟ್ಟಿಯನ್ನ ಹತ್ಯೆ ಮಾಡಲೇಬೇಕು ಎಂದು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ತಂಡ ಹತ್ಯೆ ನಡೆಸಲು ನೆರವು ನೀಡುವಂತೆ ಅನೇಕರನ್ನು ಸಂಪರ್ಕಿಸಿದ್ದಾರೆ ಎನ್ನಲಾಗ್ತಿದೆ.

ಸುಹಾಸ್ ಶೆಟ್ಟಿ ಹತ್ಯೆಗೆ ಮೂರು ತಿಂಗಳ ಹಿಂದೆಯೇ ಸ್ಕೆಚ್​ ಸಿದ್ಧವಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದೆ. ಜನವರಿಯಲ್ಲೇ ಫಾಜಿಲ್ ತಮ್ಮ ಆದಿಲ್, ಸಫ್ವಾನ್ ಟೀಮ್​ಗೆ 3 ಲಕ್ಷ ಹಣ ಕೊಟ್ಟಿದ್ದರು. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ರು.

ಪ್ರಮುಖ ಆರೋಪಿ ಸಫ್ವಾನ್ ಅನೇಕರಿಗೆ ಫೋನ್ ಮಾಡಿ ಜೈಲು ಹಾಗೂ ಬೇಲಿನ ಬಗ್ಗೆ ಮಾತಾಡಿದ್ದಾನೆ. ಕೆಲವರ ನೆರವಿಗೆ ಅಂಗಲಾಚಿದ್ದಾನೆ ಎನ್ನಲಾಗ್ತಿದೆ. ಸುಹಾಸ್ ಹತ್ಯೆ ಬಳಿಕ ತಾನೇ ಕೂಡಲೇ ಸರೆಂಡರ್ ಆಗುವ ಬಗ್ಗೆಯೂ ಚರ್ಚೆ ನಡೆಸಿದ್ದರಂತೆ ಹಂತಕರು.

ಹಿಂದೂ ಕಾರ್ಯಕರ್ತನ ನೆತ್ತರು ಹರಿಸಲು ವಿದೇಶದಿಂದಲೂ ಹರಿದು ಬಂದಿತ್ತಾ ಹಣ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಕೇವಲ ಹತ್ತು ಜನ ಮಾತ್ರವಲ್ಲದೆ ಇನ್ನಷ್ಟು ಜನ ಶಾಮೀಲಾಗಿರುವ ಶಂಕೆ ಹಿನ್ನಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here