ಕಾರಿಗೆ ಡಿಕ್ಕಿ ಹೊಡೆದ ಕಬ್ಬು ಕಟಾವು ಮಷಿನ್​: ಐವರು ದುರ್ಮರಣ!

0
Spread the love

ವಿಜಯಪುರ:- ಕಾರಿಗೆ ಕಬ್ಬು ಕಟಾವು ಮಷಿನ್​ ಡಿಕ್ಕಿ ಹೊಡೆದ ಪರಿಣಾಮ ಐವರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಜರುಗಿದೆ.

Advertisement

ಸಾವಿಗೀಡಾದವರನ್ನು ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಿವಾಸಿಗಳಾದ ನಿಂಗಪ್ಪ ಪಾಟೀಲ್ (55) ಶಾಂತವ್ವ ಶಂಕರ ಪಾಟೀಲ್ (45), ಭೀಮಶಿ ಸಂಕನಾಳ (65) ಶಶಿಕಲಾ ಜೈನಾಪೂರ (45) ಹಾಗೂ ದಿಲೀಪ್ ಪಾಟೀಲ್ (50) ಎಂದು ಗುರುತಿಸಲಾಗಿದೆ.

ಅದರಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಎಂದು ತಿಳಿದು ಬಂದಿದೆ.

ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತು. ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here