ಕಾರು ಚಲಾಯಿಸುವಾಗಲೇ ನಡೆಯಿತು ಭಯಾನಕ ಘಟನೆ: ಚಾಲಕನ ಎಡವಟ್ಟಿಗೆ ಓರ್ವ ಬಲಿ!

0
Spread the love

ಗುರುಗ್ರಾಮ:– ಕಾರು ಚಲಾಯಿಸುವಾಗಲೇ ಚಾಲಕನ ಅಜಾಗರೂಕತೆಗೆ ಭಾರೀ ಅನಾಹುತ ಸಂಭವಿಸಿರುವ ಘಟನೆ ಗುರುಗ್ರಾಮದಲ್ಲಿ ಜರುಗಿದೆ. ಸಿವಿಲ್ ಇಂಜಿನಿಯರ್ ಓರ್ವರು ಕಾರು ಚಲಾಯಿಸುವಾಗ ನಿದ್ರೆ ಬಂದ ಪರಿಣಾಮ ನಿಯಂತ್ರಣ ತಪ್ಪಿ ಕಾನೂನು ವಿದ್ಯಾರ್ಥಿಯ ಮೇಲೆ ಕಾರು ಹತ್ತಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

ಹರ್ಷ್ ಸಾವನ್ನಪ್ಪಿದ ವಿದ್ಯಾರ್ಥಿ. ಕಾನೂನು ವಿದ್ಯಾರ್ಥಿ ಹರ್ಷ್ ತನ್ನ ಸ್ನೇಹಿತ ಮೋಕ್ಷ ಜತೆ ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ಚಂಚಲ್ ಢಾಬಾಗೆ ಹೋಗಿದ್ದರು. ಢಾಬಾದಲ್ಲಿ ಹೆಚ್ಚು ಜನರಿದ್ದ ಕಾರಣ ಹರ್ಷ್‌ನ ಮತ್ತೊಬ್ಬ ಸ್ನೇಹಿತ ಅಭಿಷೇಕ್ ಕೂಡ ಅಲ್ಲಿಗೆ ಬಂದಿದ್ದಾರೆ.ಇಬ್ಬರೂ ಸರ್ವಿಸ್ ರಸ್ತೆ ರೇಲಿಂಗ್‌ನಲ್ಲಿ ಒಟ್ಟಿಗೆ ನಿಂತು ಮಾತನಾಡುತ್ತಿದ್ದರು. ಈ ಮಧ್ಯೆ, ವೇಗವಾಗಿ ಬಂದ ಕಾರು ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ.

ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಕಾನೂನು ವಿದ್ಯಾರ್ಥಿ ಹರ್ಷ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇಂಜಿನಿಯರ್ ಮೋಹಿತ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.


Spread the love

LEAVE A REPLY

Please enter your comment!
Please enter your name here