ಚಿಕ್ಕಬಳ್ಳಾಪುರ: ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಟಿಕ್ಕಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಬಳಿ ನಡೆದಿದೆ.
Advertisement
ಬೆಂಗಳೂರಿನ ಗಾಂಧಿನಗರದ ಚಿರಾಯು (24) ಧಾರುಣ ಸಾವು. ವೀಕೆಂಡ್ ಹಿನ್ನಲೆ ಬೈಕ್ನಲ್ಲಿ ಜಾಲಿ ರೈಡ್ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಸವಾರನಿಗೆ ಕಾಲು ಮುರಿತವಾಗಿದ್ದು, ಗಾಯಾಳುವನ್ನ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.