ನಿಯಂತ್ರಣ ತಪ್ಪಿ‌ ನದಿಗೆ ಬಿದ್ದ ದ್ವಿಚಕ್ರ; ಕೊಚ್ಚಿಕೊಂಡು ಹೋದ ಯುವಕ

0
Spread the love

ಬೆಳಗಾವಿ: ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಜಲಾಶಯಗಳ ಭರ್ತಿಯಾಗಿದ್ದು ನದಿಗಳಿಗೆ ನೀರು ಹರಿಸಲಾಗ್ತಿದೆ. ನದಿ ಪಾತ್ರದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ನದಿಗಳ ಅಬ್ಬರಕ್ಕೆ ಮನೆಗಳು ಜಲಾವೃತವಾಗಿದೆ. ಜಮೀನು ನೀರುಪಾಲಾಗಿವೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದು ಆತಂಕ ಹೆಚ್ಚಿಸಿದೆ.

Advertisement

ಇನ್ನೂ ಇಬ್ಬರು ಸಹೋದರರು ಪ್ರಯಾಣಿಸುತ್ತಿದ್ದ ದ್ವಿಚಕ್ರವಾಹನವೊಂದು ನಿಯಂತ್ರಣ ತಪ್ಪಿ‌ ನದಿಗೆ ಬಿದ್ದ ಪರಿಣಾಮ‌ ಓರ್ವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ಶನಿವಾರ ರಾತ್ರಿ ಕಂಗ್ರಾಳಿ ಬಳಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಅಲತ್ತಗಾ ಗ್ರಾಮದ ಓಂಕಾರ ಅರುಣ ಪಾಟೀಲ(23) ನಾಪತ್ತೆ ಯಾಗಿರುವ ಯುವಕ. ಅಲತ್ತಗಾದಿಂದ ಕಂಗ್ರಾಳಿಗೆ ಕ್ಷೌರ ಮಾಡಿಸಿಕೊಳ್ಳಲು ಹೊರಟಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದಿದೆ.

 


Spread the love

LEAVE A REPLY

Please enter your comment!
Please enter your name here