ಮೌಲ್ಯಯುತ ಜೀವನ ಆದರ್ಶಮಯ

0
Q
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮೌಲ್ಯಗಳು ವಿದ್ಯಾರ್ಥಿ ಜೀವನಕ್ಕೆ ಸನ್ಮಾರ್ಗ ತೋರುತ್ತವೆ. ಮೌಲ್ಯಯುತ ಜೀವನವು ಯಾವಾಗಲೂ ಆದರ್ಶಮಯ. ಉತ್ತಮ ನಡತೆ, ಸಚ್ಚಾರಿತ್ರ್ಯದೊಂದಿಗೆ ಮಾನವೀಯ ಮೌಲ್ಯಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಚಿಂತಕಿ ಸುಶೀಲಾ ಗಂಗಣ್ಣ ಕೋಟಿ ಹೇಳಿದರು.

Advertisement

ಅವರು ಶನಿವಾರ ಗದಗ ಮಂಜುನಾಥ ನಗರದ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 4ರಲ್ಲಿ ಮಕ್ಕಳಿಗೆ ಟೈ-ಬೆಲ್ಟ್ ವಿತರಿಸಿ ಮಾತನಾಡಿದರು.

ಶಿಸ್ತು ಬದುಕಿನ ನಿರ್ಧಾರವನ್ನು ಗುರುತಿಸುತ್ತದೆ. ಹೀಗಾಗಿ ಮಕ್ಕಳು ಶಿಸ್ತು-ಪ್ರಾಮಾಣಿಕತೆಯೊಂದಿಗೆ ವಿದ್ಯಾರ್ಜನೆಗೈಯಬೇಕು. ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರಲ್ಲದೆ, ಮಕ್ಕಳಿಗೆ ಟೈ-ಬೆಲ್ಟ್ ಕೊಡುಗೆ ನೀಡಿದ ಮಹನೀಯರನ್ನು ಅಭಿನಂದಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಧುರೀಣ ಹೊಳೇಬಸಪ್ಪ ಅಕ್ಕಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ಮೂಲಕ ಶಾಲೆಗಳ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದ್ದು, ದಾಖಲಾತಿ ಹೆಚ್ಚಳಕ್ಕೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.

ಮುಖ್ಯೋಪಾಧ್ಯಾಯರಾದ ಎಂ.ಎಂ. ಮಕಾನದಾರ ಮಾತನಾಡಿದರು. ಎಸ್.ಬಿ. ಜಕ್ಕನಗೌಡ್ರ ಸ್ವಾಗತಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here