HomeIndia Newsಇನ್ಮುಂದೆ IRCTC ಟಿಕೆಟ್ ಬುಕ್ ಮಾಡಲು ಆಧಾರ್ ಲಿಂಕ್ ಕಡ್ಡಾಯ! 3 ಹಂತಗಳಲ್ಲಿ ನಿಯಮ ಜಾರಿ

ಇನ್ಮುಂದೆ IRCTC ಟಿಕೆಟ್ ಬುಕ್ ಮಾಡಲು ಆಧಾರ್ ಲಿಂಕ್ ಕಡ್ಡಾಯ! 3 ಹಂತಗಳಲ್ಲಿ ನಿಯಮ ಜಾರಿ

For Dai;y Updates Join Our whatsapp Group

Spread the love

ನವದೆಹಲಿ: ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಹಾಗೂ ಟಿಕೆಟ್ ದಲ್ಲಾಳಿಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಐಆರ್ಸಿಟಿಸಿ (IRCTC) ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಆನ್‌ಲೈನ್ ರೈಲ್ವೇ ಟಿಕೆಟ್ ಬುಕ್ ಮಾಡುವಲ್ಲಿ ನಿರ್ಬಂಧ ಎದುರಾಗಲಿದೆ.

ಈ ನಿಯಮವನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತವು 2025ರ ಡಿಸೆಂಬರ್ 29ರಂದು ಜಾರಿಯಾಗಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಕೇವಲ ಆಧಾರ್ ಲಿಂಕ್ ಆಗಿರುವ ಖಾತೆಗಳಿಂದಲೇ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿತ್ತು. ಆಧಾರ್ ಲಿಂಕ್ ಇಲ್ಲದವರು ಮಧ್ಯಾಹ್ನ 12 ಗಂಟೆಯ ನಂತರ ಬುಕಿಂಗ್ ಮಾಡಬಹುದಾಗಿತ್ತು.

ಎರಡನೇ ಹಂತವು ಜನವರಿ 5ರಿಂದ ಜಾರಿಯಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೇವಲ ಆಧಾರ್ ಲಿಂಕ್ ಮಾಡಿದ ಐಆರ್ಸಿಟಿಸಿ ಖಾತೆಗಳಿಂದ ಮಾತ್ರ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಆಧಾರ್ ಲಿಂಕ್ ಮಾಡದ ಖಾತೆದಾರರು ಸಂಜೆ 4 ಗಂಟೆಯ ನಂತರ ಮಾತ್ರ ಬುಕಿಂಗ್ ಮಾಡಬಹುದು.

ಮೂರನೇ ಮತ್ತು ಅಂತಿಮ ಹಂತವು ಜನವರಿ 12ರಿಂದ ಜಾರಿಯಾಗಲಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಅಂದರೆ ಇಡೀ ದಿನ ಕೇವಲ ಆಧಾರ್ ಲಿಂಕ್ ಮಾಡಿದ ಖಾತೆಗಳಿಂದಲೇ ಆನ್‌ಲೈನ್ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ.

ಈ ಹೊಸ ನಿಯಮವು ಕೇವಲ ಆನ್‌ಲೈನ್ ಬುಕಿಂಗ್‌ಗೆ ಮಾತ್ರ ಅನ್ವಯವಾಗುತ್ತದೆ. ಐಆರ್ಸಿಟಿಸಿ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೆ ಈ ನಿರ್ಬಂಧ ಇರುತ್ತದೆ. ಆದರೆ ರೈಲು ನಿಲ್ದಾಣಗಳ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಈ ಕ್ರಮದಿಂದ ಫೇಕ್ ಖಾತೆಗಳು ಹಾಗೂ ದಲ್ಲಾಳಿಗಳ ಮೂಲಕ ನಡೆಯುವ ಬೃಹತ್ ಟಿಕೆಟ್ ಬುಕಿಂಗ್ ನಿಯಂತ್ರಣಕ್ಕೆ ಬರಲಿದ್ದು, ನಿಜವಾದ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಪಡೆಯುವ ಅವಕಾಶ ಹೆಚ್ಚಾಗಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಲಿಂಕ್ ಮಾಡುವ ವಿಧಾನ:
ಐಆರ್ಸಿಟಿಸಿ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಲಾಗಿನ್ ಆಗಿ, ‘My Profile’ ವಿಭಾಗಕ್ಕೆ ಹೋಗಿ ‘Aadhaar KYC’ ಆಯ್ಕೆಯನ್ನು ಆಯ್ಕೆ ಮಾಡಬೇಕು. ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ OTP ಮೂಲಕ ಪರಿಶೀಲನೆ ಪೂರ್ಣಗೊಳಿಸಬಹುದು.

ಪ್ರಯಾಣಿಕರು ಯಾವುದೇ ತೊಂದರೆ ತಪ್ಪಿಸಲು ಶೀಘ್ರದಲ್ಲೇ ತಮ್ಮ ಐಆರ್ಸಿಟಿಸಿ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿಕೊಳ್ಳುವಂತೆ ರೈಲ್ವೇ ಇಲಾಖೆ ಸಲಹೆ ನೀಡಿದೆ. ಇದರಿಂದ ಟಿಕೆಟ್ ಬುಕಿಂಗ್ ಇನ್ನಷ್ಟು ಸುಲಭ ಹಾಗೂ ಸುರಕ್ಷಿತವಾಗಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!