ಕಲಬುರಗಿ:- ಇಲ್ಲಿನ ಮಡಿವಾಳೇಶ್ವರ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ಮಹಾರಥೋತ್ಸವದ ವೇಳೆ ತೇರಿನ ಆ್ಯಕ್ಸೆಲ್ ಮುರಿದು ರಥೋತ್ಸವ ಅರ್ಧಕ್ಕೆ ಮೊಟಕುಗೊಂಡಿರುವ ಘಟನೆ ನಡೆದಿದೆ.
ರುದ್ರಮುನಿ ಶಿವಾಚಾರ್ಯರು ನಿನ್ನೆ ಸಂಜೆ ರಥೋತ್ಸವಕ್ಕೆ ಚಾಲನೆ ನೀಡಿದ್ದರು. ಮಠದ ಎದುರಿನಿಂದ ತೇರು 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿದಿದೆ. ಕೂಡಲೇ ಪೋಲಿಸ್ ಇಲಾಖೆ ಎಚ್ಚೆತ್ತು ಭಕ್ತರನ್ನು ಸುರಕ್ಷಿತವಾಗಿ ಚದುರಿಸಿದ್ದಾರೆ.
ದೇವಸ್ಥಾನ ಸಮೀತಿಯಿಂದ ರಥದ ಬುಡಕ್ಕೆ ಕಲ್ಲು, ಮರದ ತುಂಡು ಜೋಡಿಸಿ ಬಿಳದಂತೆ ಕ್ರಮ ಜರುಗಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ಧವಾಗಿರೋ ಕಡಕೋಳ ಮಡಿವಾಳೇಶ್ವರರು ಪ್ರತಿ ವರ್ಷವೂ ಸರಾಗವಾಗಿ ಸಾಗುತ್ತಿದ್ದ ರಥೋತ್ಸವಕ್ಕೆ ಈ ಬಾರಿ ಕಡಕೋಳ ಗ್ರಾಮ ಪಂಚಾಯತಿ ತನಕ ಎಳೆದು ಮರಳಿ ಮಠದತ್ತ ಬರಬೇಕಿದ್ದಾಗ ಅವಘಡ ನಡೆದಿದೆ.



