ಬಾಗಲಕೋಟೆ:- ಕೆಎಸ್ ಆರ್ ಟಿಸಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಳಲಿ ಗ್ರಾಮದ ಸಮೀಪದಲ್ಲಿ ಜರುಗಿದೆ.
Advertisement
ಮುಗಳಖೋಡ ಗ್ರಾಮದ ನಿವಾಸಿಗಳಾದ ಶಂಕರ ಲಕ್ಣ್ಮೇಶ್ವರ್ ( 50), ಶ್ರೀದೇವಿ ಲಕ್ಣ್ಮೇಶ್ವರ (40) ಮೃತ ದಂಪತಿ. ಇವರು ಮುಗಳಖೋಡದಿಂದ ಮಳಲಿ ಕಡೆಗೆ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ಬಸ್ ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ವಾಗತ ಕಮಾನ್ ನೆಲಕ್ಕುರುಳಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಡಿಪೋಗೆ ಈ KSRTC ಬಸ್ ಸೇರಿದ್ದು, ಸ್ಥಳಕ್ಕೆ ಮುಧೋಳ ಪೊಲೀಸರು ದೌಡಾಯಿಸಿ, ಪರಿಶೀಲಿಸಿದರು. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.