ಟ್ರ್ಯಾಕ್ಟರ್ ತೊಳೆಯಲು ಹೋಗಿ ಅವಘಡ: ನದಿಯಲ್ಲಿ ಮುಳುಗಿ ಇಬ್ಬರು ದುರ್ಮರಣ!

0
Spread the love

ದಾವಣಗೆರೆ:- ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯಲು ಹೋಗಿ ಇಬ್ಬರು ವ್ಯಕ್ತಿಗಳು ನೀರು ಪಾಲಾದ ಘಟನೆ ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮದ ಬಳಿ ತುಂಗಭದ್ರೆಯಲ್ಲಿ ಜರುಗಿದೆ.

Advertisement

ಗುತ್ತೂರು ಗ್ರಾಮದ 56 ವರ್ಷದ ಹನುಮಂತಪ್ಪ, 16 ವರ್ಷದ ಪ್ರಶಾಂತ್ ಸಾವನ್ನಪ್ಪಿದ ಮೃತ ದುರ್ದೈವಿಗಳು ಎನ್ನಲಾಗಿದೆ. ಹಬ್ಬದ ನಿಮಿತ್ತ ಟ್ಯ್ರಾಕ್ಟರ್ ತೊಳೆಯಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ.

ಮೊದಲು ನೀರಿನಲ್ಲಿ ತೇಲುತ್ತಿದ್ದ ಬಕೆಟ್ ಹಿಡಿಯಲು ಹೋಗಿ ಮರಳು ಗುಂಡಿಗೆ ಪ್ರಶಾಂತ್ ಬಿದ್ದಿದ್ದಾನೆ. ಈ ವೇಳೆ ಪ್ರಶಾಂತ್ ರಕ್ಷಿಸಲು ಹೋಗಿ ಹನುಮಂತಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳ, ಮತ್ತು ಸ್ಥಳೀಯರು ಶವ ಹೊರ ತೆಗೆದಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here