ನದಿಯಲ್ಲಿ ಈಜಲು ಹೋಗಿ ಅವಘಡ: ನೀರುಪಾಲಾದ 23ರ ಯುವಕ!

0
Spread the love

ಚಾಮರಾಜನಗರ:- ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಕಾವೇರಿ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲಾದ ಘಟನೆ ಜರುಗಿದೆ.

Advertisement

23 ವರ್ಷದ ಸಾಹಿಲ್ ಪಾಷ ಮೃತ ಯುವಕ. ಈತ ಬೆಂಗಳೂರಿನ ಜೆಪಿ ನಗರದ ನಿವಾಸಿ ಎನ್ನಲಾಗಿದೆ. ಬಂಡೆಗಳ ಸಮೀಪ 9 ಜನ ಯುವಕರ ಗುಂಪು ಈಜಲು ಹೋಗಿದ್ದರು. ರಂಜಾನ್ ಹಬ್ಬ ಮುಗಿದ ಹಿನ್ನೆಲೆ ಶಿವನಸಮುದ್ರ ದರ್ಗಾಕ್ಕೆ ಯುವಕ ಬಂದಿದ್ದ. ಪ್ರಾರ್ಥನೆ ಸಲ್ಲಿಸಿ ನಂತರ ವೆಸ್ಲಿ ಸೇತುವೆಯ ಬಳಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here