ಗಾಂಜಾ ಬೆಳೆದ ಆರೋಪಿ ಅರೆಸ್ಟ್

0
Spread the love

ಚಾಮರಾಜನಗರ;- ಜಿಲ್ಲೆಯಲ್ಲಿ ಗಾಂಜಾ ಬೆಳೆದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ತಾಲ್ಲೂಕಿನ ಚಂದಕವಾಡಿ ಹೋಬಳಿಯ ಮಲ್ಲದೇವನಹಳ್ಳಿ ಗ್ರಾಮದ ಸರ್ದಾರ್ ಷರೀಫ್ ಬಿನ್ ಮಹಮದ್ ಷರೀಫ್ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ. ಸರ್ದಾರ್ ಷರೀಫ್ ಜಮೀನನ್ನು ನೋಡಿಕೊಳ್ಳುತ್ತಿದ್ದ ಲೋಕೇಶ್ ಬಿನ್ ಮರಿಚಿಕ್ಕೆಗೌಡ ಎಂಬ ಆರೋಪಿ ಬಂಧಿಸಲಾಗಿದೆ.

Advertisement

ಲೋಕೇಶ್ ಎಂಬ ಆರೋಪಿ ಮಾಲೀಕನಿಗೆ ತಿಳಿಯದೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿರುತ್ತಾರೆ ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರಾದ ಆರ.ನಾಗಶಯನ, ಅಬಕಾರಿ ಉಪ ಅಧೀಕ್ಷಕ, ಮೋಹನ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.

545 ಗ್ರಾಂ ತೂಕದ ಗಾಂಜಾ ಗಿಡ ವಶ ಹಾಗೂ ಆರೋಪಿಯನ್ನು ದಸ್ತಗಿರಿಗೊಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ದಾಳಿಯ ಕಾರ್ಯದಲ್ಲಿ ಅಬಕಾರಿ ನಿರೀಕ್ಷಕರು ಉಮಾಶಂಕರ್, ಚಾಮರಾಜನಗರ ಉಪವಿಭಾಗ ಉಪನಿರೀಕ್ಷಕರು ನಂದಿನಿ ಬಿ.ಪಿ ಕಾನ್ ಸ್ಟೇಬಲ್ ರವಿ, ನಾಗೇಶ್ ಹಾಗೂ ವಾಹನ ಚಾಲಕರಾದ ವೀರತಪ್ಪ ರವರು ಭಾಗವಹಿಸಿದ್ದರು. ಪ್ರಕರಣವನ್ನು ಅಬಕಾರಿ ಉಪನಿರೀಕ್ಷಕರಾದ ನಂದಿನಿ ಬಿ.ಪಿ ದಾಖಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here