ಕಲಬುರಗಿ: ಸಾಲಗಾರರ ಕಿರುಕುಳಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದ ಬೇಲೂರ್ ಕ್ರಾಸ್ ಬಳಿ ನಡೆದಿದೆ. ಚಂದ್ರಕಾಂತ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ಆಟೋ ಚಾಲಕನಾಗಿ ಜೀವನ ನಡೆಸ್ತಿದ್ದ ಚಂದ್ರಕಾಂತ್, ಹೊಟೇಲ್ ಮಾಲೀಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಸಾಲ ತೀರಿಸಿದ್ರೂ ಬಡ್ಡಿ, ಚಕ್ರ ಬಡ್ಡಿ ನೀಡುವಂತೆ ಕಿರುಕುಳ ಆರೋಪ ಕೇಳಿ ಬಂದಿದ್ದು, ಆತ್ಮಹತ್ಯೆ ಗೆ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.