HomeEducationದ್ವಿತೀಯ ಪಿಯು ಪರೀಕ್ಷೆಯಲ್ಲಿ ಸ್ಪೂರ್ತಿ ಬಳ್ಳಾರಿ ಸಾಧನೆ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸ್ಪೂರ್ತಿ ಬಳ್ಳಾರಿ ಸಾಧನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷ ಹಾಗೂ ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗದಗ ತಾಲೂಕು ಅಧಿಕಾರಿಗಳಾಗಿರುವ ಡಾ. ಬಸವರಾಜ ಬಳ್ಳಾರಿ ಅವರ ಪುತ್ರಿ ಸ್ಪೂರ್ತಿ ಬಸವರಾಜ ಬಳ್ಳಾರಿ ಅವರು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 571 ಪಡೆಯುವ ಮೂಲಕ ಶೇ. 95.16ರಷ್ಟು ಅಂಕಗಳನ್ನು ಗಳಿಸಿ, ಕೊಪ್ಪಳ ಜಿಲ್ಲೆಯ ಚೇತನಾ ಪಿಯು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಇಂಗ್ಲಿಷ್-96, ಹಿಂದಿ-91, ಫಿಸಿಕ್ಸ್-95, ಕೆಮೆಸ್ಟಿ-95, ಮ್ಯಾಥಮೆಟಿಕ್ಸ್-94, ಬಯಾಲಜಿ-100ರಷ್ಟು ಅಂಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಸಾಧನೆ ಮೆರೆದ ಸ್ಪೂರ್ತಿ ಬಸವರಾಜ ಬಳ್ಳಾರಿ ಅವರಿಗೆ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ, ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!