ತುಮಕೂರು:- ಕಿಡಿಗೇಡಿಗಳು ನಿಧಿ ಆಸೆಗಾಗಿ ಮಧ್ಯ ರಾತ್ರಿ ದೇವಸ್ಥಾನದ ಬಂಡೆ ಕೊರೆದ ಘಟನೆ ತುಮಕೂರು ತಾಲೂಕಿನಲ್ಲಿರುವ ವಡ್ಢರಹಳ್ಳಿ ಗ್ರಾಮದ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜರುಗಿದೆ. ಅರಿಶಿನ, ಕುಂಕುಮ, ತೆಂಗಿನಕಾಯಿ ಹಾಗೂ ವಸ್ತ್ರವನ್ನಿಟ್ಟು ಕಿಡಿಗೇಡಿಗಳು ಪೂಜೆ ಮಾಡಿದ್ದಾರೆ. ಬಳಿಕ ನಿಧಿ ಸಿಗದೇ ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ.
Advertisement
ದೇವಸ್ಥಾನಕ್ಕೆ ಪೂಜೆ ಮಾಡಲು ಬಂದ ಅರ್ಚಕರು ನಿಧಿಗೆ ಶೋಧ ನಡೆದಿರುವುದನ್ನು ಕಂಡು ಬಿಚ್ಚಿಬಿದ್ದಿದ್ದಾರೆ. ದೇವಸ್ಥಾನಕ್ಕೆ ಗ್ರಾಮಸ್ಥರೆಲ್ಲ ಭೇಟಿ ನೀಡಿದ್ದು ದೇವಸ್ಥಾನಕ್ಕೆ ಭದ್ರತೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರಿಂದ ತನಿಖೆ ಮುಂದುವರಿದಿದೆ.