ಆತ್ಮಸಾಕ್ಷಿಗೆ ನಡೆದುಕೊಳ್ಳೋ ಹಾಗಿದ್ರೆ ನೀವು ರಾಜೀನಾಮೆ ಕೊಡ್ತಿದ್ರಿ: ಸಿದ್ದು ವಿರುದ್ಧ CT ರವಿ ಕಿಡಿ!

0
Spread the love

ಬೆಂಗಳೂರು:- ಆತ್ಮಸಾಕ್ಷಿಗೆ ನಡೆದುಕೊಳ್ಳೋ ಹಾಗಿದ್ರೆ ನೀವು ಖಂಡಿತ ರಾಜೀನಾಮೆ ಕೊಡ್ತಿದ್ರಿ ಎಂದು ಹೇಳುವ ಮೂಲಕ CM ಸಿದ್ದರಾಮಯ್ಯ ವಿರುದ್ಧ CT ರವಿ ಕಿಡಿಕಾರಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು,ನಿನ್ನೆ ಸಿದ್ದರಾಮಯ್ಯ ನೈತಿಕತೆ, ಆತ್ಮಸಾಕ್ಷಿ ಮಾತುಗಳನ್ನಾಡಿದ್ದಾರೆ. ಬಹಳ ಸಂತೋಷ ಸಂಗತಿ. ನಾನು ಸಮಾಜವಾದಿಗಳಿಗೆ ಆತ್ಮ, ಆತ್ಮಸಾಕ್ಷಿ ಇರೊಲ್ಲ ಅಂದುಕೊಂಡಿದ್ದೆ. ಸಿದ್ದರಾಮಯ್ಯಗೆ ಆತ್ಮ, ಆತ್ಮಸಾಕ್ಷಿ ಇದೇ ಅನ್ನೋದು ಸಂತೋಷ. ಯಾರು ಆತ್ಮ ಇದೆ ಎಂದು ನಂಬುತ್ತಾರೋ ಅವರು ಪರಮಾತ್ಮನನ್ನು ನಂಬಬೇಕು. ಜಗತ್ತಿನಲ್ಲಿ ಪರಮಾತ್ಮ ಮತ್ತು ಆತ್ಮಕ್ಕೆ ಮೋಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಬಹುದು. ಪರಮಾತ್ಮನ ಬಳಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಪರಮಾತ್ಮನ ಹತ್ತಿರ ನಾವೇನು ಒಳ್ಳೆಯದು ಮಾಡುತ್ತೇವೆ ಅದು ದಾಖಲಾಗುತ್ತೆ. ಏನು ತಪ್ಪು ಮಾಡಿದ್ದೀವೋ ಅದು ದಾಖಲಾಗುತ್ತೆ. ಸಿಎಂ ಅವರು ನಿಜವಾಗಿ ಆತ್ಮ ಇದೆ, ಪರಮಾತ್ಮ ಇದ್ದಾನೆ ಎಂದು ಒಪ್ಪಿಕೊಳ್ಳೋದಾದ್ರೆ ಸುಳ್ಳಿನ ಸಮರ್ಥನೆಗೆ ಇಳಿಯುತ್ತಿರಲಿಲ್ಲ. ಅಪವಾದ ಬಂದ ದಿನವೇ ರಾಜೀನಾಮೆ ಕೊಡುತ್ತಿದ್ದಿರಿ ಎಂದು ಸಿಎಂ ಆತ್ಮಸಾಕ್ಷಿ ಮಾತಿಗೆ ತಿರುಗೇಟು ನೀಡಿದರು.

ಆತ್ಮಸಾಕ್ಷಿ ಮಾತಾಡುವವರದ್ದು ಸಮಾಜವಾದಿಗಳ ಆತ್ಮ. ಪರಮಾತ್ಮನನ್ನ ನಂಬದೇ ಇರೋದ್ರೀಂದ ನೀವು ಸಮಾಜವಾದಿ ಹೌದೋ ಅಲ್ಲವೋ ಎಂದು ನಾನು ತೀರ್ಮಾನ ಕೊಡುವುದಿಲ್ಲ. ಆತ್ಮಸಾಕ್ಷಿಗೆ ನಡೆದುಕೊಳ್ಳುವ ಹಾಗಿದ್ರೆ ನೀವು ರಾಜೀನಾಮೆ ಕೊಡ್ತಿದ್ರಿ ಎಂದರು.

ನೈತಿಕ ಮೌಲ್ಯಗಳನ್ನ ಎತ್ತಿಹಿಡಿಯೋ ರಾಜಕಾರಣಿ ಆಪಾದನೆ ಬಂದಾಗ ರಾಜೀನಾಮೆ ಕೊಡ್ತಾನೆ. ಎಫ್‌ಐಆರ್ ರಿಜಿಸ್ಟರ್ ಆದಾಗಲೂ ಇವರು ರಾಜೀನಾಮೆ ಕೊಡದೇ ಹೋದರೆ ನೈತಿಕತೆಗೂ ಇವರಿಗೂ ಸಂಬಂಧವಿಲ್ಲ. ಯಾಕ್ರಿ ಸೈಟ್ ವಾಪಸ್ ಕೋಡಬೇಕು. 62 ಕೋಟಿ ರೂ. ಕೊಡಿ ಅಂತ ಕೇಳಿದ್ದು ಸಿದ್ದರಾಮಯ್ಯ ಅವರೇ. ಈಗ ನೀವು ಕೇಳಿ 62 ಕೋಟಿ ರೂ. ಸಿಕ್ತಾ ಅಂತ ಸಿಎಂ ಗೆ ಕೇಳಿ ಎಂದು ಪ್ರಶ್ನೆ ಮಾಡಿದರು.


Spread the love

LEAVE A REPLY

Please enter your comment!
Please enter your name here