ಕೇರಳದ ಪ್ರಸಿದ್ಧ ದೇವಸ್ಥಾನಕ್ಕೆ ನಟ ದರ್ಶನ್ ಭೇಟಿ: ಶತ್ರು ಸಂಹಾರ ಪೂಜೆ ಮಾಡಿಸಿದ ದಾಸ

0
Spread the love

ಸ್ಯಾಂಡಲ್​ವುಡ್ ನಟ ದರ್ಶನ್ ಕುಟುಂಬ ಸಮೇತ ಕೇರಳದ ಪ್ರಸಿದ್ಧ ದೇವಸ್ಥಾನ ಮಡಾಯಿಕಾವಿಗೆ ಭೇಟಿ ನೀಡಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಮಡಾಯಿಕಾವಿಗೆ ದೇವಸ್ಥಾನ ಅತ್ಯಂತ ಪ್ರಸಿದ್ಧವಾಗಿದ್ದು ದೂರದ ಊರುಗಳಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ನಟ ದರ್ಶನ್ ಪತ್ನಿ ಹಾಗೂ ಮಗನೊಂದಿಗೆ ಮಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

Advertisement

ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಮಾಡಾಯಿಯಲ್ಲಿರುವ ಮಾಡಾಯಿ ಕಾವು ದೇವಸ್ಥಾನ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಸ್ಥಾನಕ್ಕೆ ರಾಜಕಾರಣಿಗಳೂ ಬರುತ್ತಾರೆ. ಶ್ರೀ ತಿರುವರ್ಕ್ಕಟ್ಟು ಕಾವು ಭಗವತಿ ದೇವಸ್ಥಾನವು ಭಕ್ತರಿಗೆ ಕೋಳಿ ಖಾದ್ಯವನ್ನು ‘ಪ್ರಸಾದ’ವಾಗಿ ಬಡಿಸುವ ಪದ್ಧತಿಯನ್ನು ಅನುಸರಿಸುತ್ತಿದೆ. ಮಾಂಸಾಹಾರ ತಿನ್ನದವರಿಗೆ ಬೇಯಿಸಿದ ಹೆಸರು ಕಾಳು, ಅಕ್ಕಿ, ಬೆಲ್ಲದಿಂದ ಮಾಡಲಾದ ಪ್ರಸಾದವನ್ನು ನೀಡಲಾಗುತ್ತದೆ.

ಈ ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥಾನ. ಇದು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ ದೇವಸ್ಥಾನವಾಗಿದೆ. ಇಲ್ಲಿನ ದೇವತೆಯು ಭದ್ರಾಕಳಿಯು ಉಗ್ರ ರೂಪವಾಗಿದೆ.


Spread the love

LEAVE A REPLY

Please enter your comment!
Please enter your name here