ನಟ ದರ್ಶನ್ ಭೇಟಿಯಾಗಲು ಬಳ್ಳಾರಿ ಜೈಲಿಗೆ ಬಂದ ಧನ್ವೀರ್ ಗೌಡ!

0
Spread the love

ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಇನ್ನೂ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ನೋಡಲು ಇಂದು ಸುಶಾಂತ್‌ ನಾಯ್ಡು ಜೊತೆ ಧನ್ವೀರ್ ಗೌಡ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಬೆನ್ನು ನೋವಿನಿಂದ ನರಳುತ್ತಲೇ ಆಪ್ತರನ್ನು ದರ್ಶನ್ ಭೇಟಿಯಾಗಿದ್ದಾರೆ.

Advertisement

ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರ ಸ್ಕ್ಯಾನಿಂಗ್ ಮೆಡಿಕಲ್ ರಿಪೋರ್ಟ್‌ನಲ್ಲಿ L5 S1 ಸಮಸ್ಯೆ ಇರೋದು ತಿಳಿದು ಬಂದಿದೆ. ಈ ಹಿನ್ನೆಲೆ ದರ್ಶನ್ ನೋಡಲು ಸಂಬಂಧಿ ಸುಶಾಂತ್ ನಾಯ್ಡು, ನಟ ಧನ್ವೀರ್ ಗೌಡ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಬಳಿಕ ಆರೋಗ್ಯದ ಕುರಿತು, ಮುಂದಿನ ಕಾನೂನು ಸಮರದ ಬಗ್ಗೆ ಚರ್ಚಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here