HomeEntertainmentನಟಿ ಮೇಲಿನ ಹಲ್ಲೆ ಪ್ರಕರಣ: ನಟ ದಿಲೀಪ್ ಖುಲಾಸೆ – ಪಲ್ಸರ್ ಸುನಿ ಸೇರಿದಂತೆ ಆರು...

ನಟಿ ಮೇಲಿನ ಹಲ್ಲೆ ಪ್ರಕರಣ: ನಟ ದಿಲೀಪ್ ಖುಲಾಸೆ – ಪಲ್ಸರ್ ಸುನಿ ಸೇರಿದಂತೆ ಆರು ಮಂದಿ ದೋಷಿ

For Dai;y Updates Join Our whatsapp Group

Spread the love

ನಟಿ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ತಿರುವು ಮೂಡಿದೆ. 8ನೇ ಆರೋಪಿ ನಟ ದಿಲೀಪ್‌ ಅವರು ಎಲ್ಲಾ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ. ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿ ಸೇರಿದಂತೆ ಒಟ್ಟು ಆರು ಮಂದಿಯನ್ನು ದೋಷಿಗಳೆಂದು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ಆರು ವರ್ಷಗಳ ಕಾಲ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದರು.

ಸಾಮೂಹಿಕ ಅತಿಕ್ರಮ, ಅಪಹರಣ ಮತ್ತು ಸಂಚು ರೂಪಿಸಿದ ಆರೋಪಗಳನ್ನು ಪಲ್ಸರ್ ಸುನಿ ಹಾಗೂ ತಂಡದ ವಿರುದ್ಧ ಪ್ರಾಸಿಕ್ಯುಷನ್ ಮಾಡಿತ್ತು ಮತ್ತು ನ್ಯಾಯಾಲಯವು ಅದನ್ನು ಸಾಬೀತಾಗಿದೆಯೆಂದು ದೃಢಪಡಿಸಿದೆ. ಆದರೆ, ಘಟನೆಗೆ ನೇರವಾಗಿ ಸಂಬಂಧಿಸಿಲ್ಲದಿದ್ದರೂ ಮುಖ್ಯ ಸೂತ್ರಧಾರ ಎಂದು ಪ್ರಾಸಿಕ್ಯುಷನ್ ಆರೋಪಿ ಮಾಡಿದ್ದ ದಿಲೀಪ್ ವಿರುದ್ಧದ ಆರೋಪಗಳು ಸಾಕ್ಷಿಗಳ ಕೊರತೆಯಿಂದ ಸಾಬೀತಾಗಲಿಲ್ಲ. ತನ್ನನ್ನು ಪ್ರಕರಣದಲ್ಲಿ ಸುಳ್ಳುವಾಗಿ ಸಿಲುಕಿಸಲಾಗಿದೆ ಎಂದು ದಿಲೀಪ್ ಆರಂಭದಿಂದಲೂ ಹೇಳುತ್ತಿದ್ದರು.

ಕೃತ್ಯದಲ್ಲಿ ನೇರವಾಗಿ ಭಾಗವಹಿಸಿದ್ದ ಆರು ಮಂದಿಯೊಂದಿಗೆ ಸೇರಿ ಒಟ್ಟು ಹತ್ತು ಮಂದಿ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಸಂತ್ರಸ್ತ ನಟಿಯ ಮೇಲಿನ ಹಲ್ಲೆಗೆ ದಿಲೀಪ್ ಸುಪಾರಿ ನೀಡಿದ್ದರು ಎಂಬ ಆರೋಪವೂ ಪ್ರಕರಣದಲ್ಲಿ ಉದ್ಭವಿಸಿತ್ತು. ಆದರೆ ವಿಚಾರಣೆ ಪ್ರಗತಿಯಲ್ಲಿದ್ದಾಗ 28 ಸಾಕ್ಷಿಗಳು ಪ್ರಾಸಿಕ್ಯುಷನ್ ವಿರುದ್ಧವಾಗಿ ಹೇಳಿಕೆ ನೀಡಿದ್ದರು. 2017ರ ಫೆಬ್ರವರಿಯಲ್ಲಿ ಸಂಜೆ ಕೊಚ್ಚಿಯಲ್ಲಿ ಪ್ರಯಾಣಿಸುತ್ತಿದ್ದಾಗ ನಟಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು.ಈ ಪ್ರಕರಣದಲ್ಲಿ ಬಂಧಿತನಾಗಿದ್ದ ದಿಲೀಪ್ ಮತ್ತು ಇತರ ಆರೋಪಿಗಳು ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.

2017ರ ಜುಲೈ 10ರಂದು ದಿಲೀಪ್ ಅವರನ್ನು ಬಂಧಿಸಲಾಗಿತ್ತು ಮತ್ತು 85 ದಿನಗಳ ಬಳಿಕ ಅಕ್ಟೋಬರ್‌ನಲ್ಲಿ ಅವರಿಗೆ ಜಾಮೀನು ದೊರೆತಿತ್ತು. ಮೊದಲ ಆರೋಪಿ ಪಲ್ಸರ್ ಸುನಿ 2017ರಲ್ಲಿ ಬಂಧಿತರಾಗಿ, ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು. 2019ರಲ್ಲಿ ಪ್ರಾರಂಭವಾದ ವಿಚಾರಣೆ ವೇಳೆ 261 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದ್ದು, 1700ಕ್ಕೂ ಹೆಚ್ಚು ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಪೊಲೀಸ್ ಅಧಿಕಾರಿಗಳಾದ ಅನೀಶ್, ವಿಪಿನ್ ಲಾಲ್ ಮತ್ತು ವಿಷ್ಣು ಅವರನ್ನು ಮಾನ್ಯ ಸಾಕ್ಷಿಗಳನ್ನಾಗಿ ಮಾಡಲಾಗಿತ್ತು. ವಕೀಲರಾದ ರಾಜು ಜೋಸೆಫ್ ಮತ್ತು ಪ್ರತೀಶ್ ಚಾಕೋ ಅವರನ್ನು ಈ ಮೊದಲು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಸಂತ್ರಸ್ತ ನಟಿ ವಿಚಾರಣೆ ವೇಳೆ 2012ರಿಂದಲೇ ದಿಲೀಪ್ ತನ್ನ ಮೇಲೆ ದ್ವೇಷ ಹೊಂದಿದ್ದರು ಎಂದು ಹೇಳಿಕೆ ನೀಡಿದ್ದರು. ಕಾವ್ಯಾ ಮಾಧವನ್ ಜೊತೆಗಿನ ಸಂಬಂಧದ ವಿಷಯವನ್ನು ಮಂಜು ವಾರಿಯರ್ ಅವರಿಗೆ ತಿಳಿಸಿದ್ದೇ ದ್ವೇಷ ಹುಟ್ಟಿಸಿದ ಘಟನೆ ಎಂದು ನಟಿ ಹೇಳಿದ್ದರು. ತನ್ನ ವಿರುದ್ಧ ನಿಂತವರು ಮಲಯಾಳಂ ಚಿತ್ರರಂಗದಲ್ಲಿ ಯಾವುದೇ ಮಟ್ಟಕ್ಕೆ ತಲುಪಿಲ್ಲ ಎಂದು ದಿಲೀಪ್ ಹೇಳುತ್ತಿದ್ದರೆಂಬ ಆರೋಪವೂ ವಿಚಾರಣೆಯಲ್ಲಿ ಎದುರಾಯಿತು. ಪಲ್ಸರ್ ಸುನಿ ಪ್ರಾರಂಭದಲ್ಲಿ ದಿಲೀಪ್‌ರನ್ನು ಗುರುತಿಸುವುದಿಲ್ಲವೆಂದು ಹೇಳಿದ್ದರೂ, ವಿಚಾರಣೆ ವೇಳೆ ತಾವು ಪರಸ್ಪರ ಪರಿಚಯಸ್ಥರು ಎಂದು ಒಪ್ಪಿಕೊಂಡಿದ್ದನು.

ನಟಿಯ ಮೇಲೆ ದಾಳಿಯ ದೃಶ್ಯಗಳನ್ನು ಚಿತ್ರೀಕರಿಸಲು ಪಲ್ಸರ್ ಸುನಿ ಮತ್ತು ತಂಡ ಈ ಹಿಂದೆ ಕೂಡ ಪ್ರಯತ್ನಿಸಿದ್ದರೆಂದು ಪ್ರಾಸಿಕ್ಯೂಷನ್ ತಿಳಿಸಿತ್ತು. 2017ರ ಜನವರಿ 3ರಂದು ಗೋವಾದಲ್ಲಿ ಹಲ್ಲೆ ಮಾಡಲು ಯೋಜನೆ ರೂಪಿಸಲಾಗಿತ್ತು, ಆದರೆ ನಟಿ ಬೆಳ್ಳಿಗ್ಗೆ ಶೂಟಿಂಗ್ ಮುಗಿಸಿ ಹಿಂತಿರುಗಿದ ಕಾರಣ ಕೃತ್ಯ ವಿಫಲವಾಗಿತ್ತು. ಕೊನೆಗೆ ಕೊಚ್ಚಿಯಲ್ಲಿ ಘಟನೆ ಜರುಗಿತು.

ಈ ಪ್ರಕರಣದ ಅಂತಿಮ ತೀರ್ಪು ಹೊರಬಂದಿದ್ದು, ದಿಲೀಪ್ ಖುಲಾಸೆಯಾಗಿರುವುದು ಮತ್ತು ಪಲ್ಸರ್ ಸುನಿ ಸೇರಿದಂತೆ ಆರು ಮಂದಿ ದೋಷಿಗಳಾಗಿರುವುದು ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!