ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಕುರಿತು ಡಾಕ್ಯುಮೆಂಟರಿ ಮಾಡಲು ಸಿದ್ದತೆ ನಡೆಸಲಾಗಿದೆ. ಭಾರತದ ಖ್ಯಾತ ಉದ್ಯಮಿಗಳಿಗೆ, ರಾಜಕೀಯ ಗಣ್ಯರಿಗೆ, ಸಿನಿಮಾ ನಟ-ನಟಿಯರಿಗೆ ಮೋಸ ಮಾಡಿರುವ ಸುಖೇಶ್, ಭಾರತದ ಮಹಾನ್ ವಂಚಕ ಎಂಬ ಬಿರುದು ಪಡೆದಿದ್ದಾನೆ. ಈತನ ಜೀವನವನ್ನು ತೆರೆ ಮೇಲೆ ತರಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ವರದಿಯ ಪ್ರಕಾರ, ಸುಕೇಶ್ ಚಂದ್ರಶೇಖರ್ ಅವರ ವಿವಾದಾತ್ಮಕ ಪ್ರಯಾಣ, ಅವರ ಆರಂಭಿಕ ಹಗರಣ ಹಿಡಿದು ದೇಶದ ಗಮನ ಸೆಳೆದ ಹೈ ಪ್ರೊಫೈಲ್ ಐಷಾರಾಮಿ ಉಡುಗೊರೆ ದಂಧೆಯವರೆಗೆ ಇರಲಿದೆ ಎನ್ನಲಾಗಿದೆ. ಜೊತೆಗೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟಿ ಜಾಕ್ವೆಲಿನ್ ಅವರನ್ನು ಸಾಕ್ಷ್ಯಚಿತ್ರದ ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ ಎಂದು ವರದಿಯಾಗಿದೆ.
ಈಗಾಗಲೇ ಸಂಶೋಧನಾ ತಂಡವು ಈಗಾಗಲೇ ಈ ಬಗ್ಗೆ ನಿರೂಪಣೆ ಮಾಡಲು ಪ್ರಾರಂಭಿಸಿದೆ, ಜಾಕ್ವೆಲಿನ್, ಈ ಬಗ್ಗೆ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಡಾಕ್ಯುಮೆಂಟರಿಯಲ್ಲಿ ತಮ್ಮನ್ನು ಹೇಗೆ ತೋರಿಸಲಾಗುತ್ತದೆ ಎಂಬ ಬಗ್ಗೆ ಆತಂಕಗೊಂಡಿದ್ದಾರಂತೆ. ತಮ್ಮ ಬಗ್ಗೆ ಋಣಾತ್ಮಕವಾಗಿ ತೋರಿಸದೇ ಇರುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಆ ವಿಷಯ ಬೇಡ, ಈ ವಿಷಯ ಬೇಡ ಎಂದು ತಕರಾರು ಸಹ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಡಾಕ್ಯುಮೆಂಟರಿ ನಿರ್ಮಾಣ ತಡವಾಗುತ್ತಿದೆಯಂತೆ.
2026 ರ ಮಧ್ಯಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಏಪ್ರಿಲ್ 6 ರಂದು ತನ್ನ ತಾಯಿ ಕಿಮ್ ನಿಧನರಾದ ನಂತರ ಸುಕೇಶ್ ಚಂದ್ರಶೇಖರ್ ಇತ್ತೀಚೆಗೆ ಜಾಕ್ವೆಲಿನ್ಗೆ ಹೃತ್ಪೂರ್ವಕ ಪತ್ರವನ್ನು ಬರೆಯುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದರು. ಜಾಕ್ವೆಲಿನ್ ಫರ್ನಾಂಡೀಸ್ ತಾಯಿಗಾಗಿ ಬಾಲಿಯಲ್ಲಿ ಒಂದು ಉದ್ಯಾನವನ್ನು ಡೆಡಿಕೇಟ್ ಮಾಡುವುದಾಗಿ, ಆ ಉದ್ಯಾನದಲ್ಲಿ ಜಾಕ್ವೆಲಿನ್ ತಾಯಿಗೆ ಇಷ್ಟವಾದ ಎಲ್ಲ ಹೂವುಗಳು ಇರುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದ.