ಖ್ಯಾತ ಗಾಯಕ ಸೋನು ನಿಗಮ್ ಅವರು ಇತ್ತೀಚೆಗೆ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಕೊನೆಗೂ ಸೋನು ಕ್ಷಮೆ ಕೇಳಿದ್ದಾಗಿ. ನಟಿ ನಯನ ನಾಗರಾಜ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಕನ್ನಡಿಗರಿಗೆ ಬೇಸರ ತರಿಸಿದೆ.
‘’ಲವ್ ಯು.. ನಿಮ್ಮನ್ನು ಬ್ಯಾನ್ ಮಾಡಿದರೆ ಅದು ಕೆಎಫ್ಐಗೆ ನಷ್ಟ’’ ಎಂದು ಕಾಮೆಂಟ್ ಮಾಡಿದ್ದಾರೆ. ನಯನ ನಾಗರಾಜ್ ಮಾಡಿರುವ ಕಾಮೆಂಟ್ಗೆ ಅನೇಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ’ಕರ್ನಾಟಕದಲ್ಲೇ ಒಳ್ಳೆ ಒಳ್ಳೆ ಸಿಂಗರ್ ಇದ್ದಾರೆ ಬಿಡಿ. ನೋಡ್ಕೊಂಡು ಸಪೋರ್ಟ್ ಮಾಡಿ ನಯನ’’ ಎಂದು ಹಲವರು ನಯನ ನಾಗರಾಜ್ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.
ಈ ಬಗ್ಗೆ ಸಾಕಷ್ಟು ಪರ ವಿರೋಧ ವ್ಯಕ್ತವಾಗುತ್ತಿದ್ದಂತೆ ನಟಿ ಅವರನ್ನು ಕೆಎಫ್ಐ ಗಾಯಕರೊಂದಿಗೆ ಯಾರೂ ಹೋಲಿಸುತ್ತಿಲ್ಲ. ಕರ್ನಾಟಕದಲ್ಲಿ ಅದ್ಭುತ ಗಾಯಕರಿದ್ದಾರೆ ಮತ್ತು ನಾನು ರಾಜೇಶ್ ಕೃಷ್ಣನ್ ಸರ್ ಅವರ ದೊಡ್ಡ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ.
ನಾನು ಎಲ್ಲಾ ಭಾಷೆಗಳನ್ನು ಮತ್ತು ಎಲ್ಲಾ ರೀತಿಯ ಸಂಗೀತವನ್ನು ಕೇಳುತ್ತೇನೆ. ಏಕೆಂದರೆ ಸಂಗೀತಕ್ಕೆ ಯಾವುದೇ ಭಾಷೆಯ ತಡೆಗೋಡೆ ಇಲ್ಲ. ನಾನು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇನೆ .ನಾವು ಶಾಸ್ತ್ರೀಯ ಸಂಗೀತವನ್ನು ಹಾಡುವಾಗ, ಕರ್ನಾಟಕ ಸಂಗೀತದಲ್ಲಿ ತಮಿಳು ಅಥವಾ ತೆಲುಗಿನಲ್ಲಿರುವ ಕೀರ್ತನೆಗಳನ್ನು ಹಾಡುತ್ತೇವೆ ಎಂದಿದ್ದಾರೆ.
ನಾನು ಕನ್ನಡವನ್ನು ಅಗೌರವಿಸುತ್ತೇನೆ ಎಂದರ್ಥವಲ್ಲ. ಎಲ್ಲದರಲ್ಲೂ ಸಂಗೀತವನ್ನು ಕಲಿಯಬೇಕು, ಅದನ್ನು ಗೌರವಿಸಲು. ಮತ್ತು ಸಂಗೀತ ನಿಜವಾಗಿಯೂ ಏನೆಂದು ತಿಳಿದುಕೊಳ್ಳಿ. ಕನ್ನಡ ನನ್ನ ಭಾಷೆ ಮತ್ತು ನಾನು ಯಾವಾಗಲೂ ಅದನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.