ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎ೧ ಆರೋಪಿಯಾಗಿ ಸುಮಾರು ೭ ತಿಂಗಳ ಕಾಲ ಜೈಲಿನಲ್ಲಿದ್ದು ಬಂದಿರುವ ನಟಿ ಪವಿತ್ರಾ ಗೌಡ ಪ್ರೇಮಿಗಳ ದಿನದಂದು ಹೊಸ ಜೀವನ ಶುರುಮಾಡಿದ್ದಾರೆ. ಸುಮಾರು ೭ ತಿಂಗಳಿನಿಂದ ಬಾಗಿಲು ಹಾಕಿದ್ದ ಪವಿತ್ರಾ ಗೌಡ ಅವರ ಕನಸಿನ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಇಂದು ರೀಲಾಂಚ್ ಮಾಡಿದ್ದಾರೆ.
ಬೆಂಗಳೂರಿನ ಆರ್ ಆರ್ ನಗರದಲ್ಲಿ ಪವಿತ್ರಾ ಗೌಡ ‘ರೆಡ್ ಕಾರ್ಪೆಟ್’ ಸ್ಟುಡಿಯೋನ ಹೊಂದಿದ್ದರು. ಆದರೆ ಪವಿತ್ರಾ ಗೌಡ ಅವರು ಜೈಲು ಸೇರಿದ ಬಳಿಕ ಅದನ್ನು ಬಂದ್ ಮಾಡಲಾಗಿತ್ತು. ಇದೀಗ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಪವಿತ್ರಾ ಗೌಡ ಮತ್ತೆ ತಮ್ಮ ಸ್ಟುಡಿಯೋಗೆ ಹೊಸ ಟಚ್ ನೀಡಿ ರೀಲಾಂಚ್ ಮಾಡಿದ್ದಾರೆ. ಇಂದು ಸಿಂಪಲ್ ಆಗಿ ಪೂಜೆ ಮಾಡುವ ಮೂಲಕ ಸ್ಟುಡಿಯೋ ಮತ್ತೆ ಓಪನ್ ಮಾಡಿದ್ದಾರೆ.
ಇಂದು ಅಂದರೆ ಫೆಬ್ರವರಿ 14 ಎಂದರೆ ಪ್ರೇಮಿಗಳ ದಿನ. ಈ ವಿಶೇಷ ದಿನವೇ ಈ ಸ್ಟುಡಿಯೋ ರೀ ಲಾಂಚ್ ಮಾಡಿದ್ದಾರೆ. ರೆಡ್ ಥೀಮ್ನಲ್ಲಿ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ರೀ ಲಾಂಚ್ ಮಾಡಿದ್ದಾರೆ. 2022 ರಲ್ಲಿ ರೆಡ್ ಕಾರ್ಪೆಟ್ ಶುರುಮಾಡಿದ್ದ ಪವಿತ್ರಗೆ ಸಾಥ್ ನೀಡಿದ್ದು ನಟ ದರ್ಶನ್. ಇದೀಗ ಮತ್ತೆ ತಮ್ಮ ಬ್ಯುಸಿನೆಸ್ ಸಕ್ಸಸ್ಫುಲ್ ಆಗಿ ರನ್ ಮಾಡುವ ಭರವಸೆಯಲ್ಲಿದ್ದಾರೆ ನಟಿ ಪವಿತ್ರಾ ಗೌಡ.