ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

0
Spread the love

ಬೆಳಗಾವಿ: ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಕೈದಿ ಬೆಳಗಾವಿಯ ‌ಹಿಂಡಲಗಾ ಜೈಲಿಗೆ ಏರ್ ಲಿಫ್ಟ್ ಆಗಿದ್ದಾನೆ. ಮಹಾರಾಷ್ಟ್ರದ ನಾಗ್ಪುರ ‌ಜೈಲಿನಿಂದ ಹಿಂಡಲಗಾ ‌ಕೇಂದ್ರ ಕಾರಾಗೃಹಕ್ಕೆ ಉಗ್ರ ಅಪ್ಸರ್ ಫಾಷಾ ‌ಶಿಫ್ಟ್ ಮಾಡಲಾಗಿದ್ದು, ಕೇಂದ್ರ ‌ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಿ 100 ಕೋಟಿ ರೂ ಬೇಡಿಕೆಯಿಟ್ಟಿದ್ದನು.

Advertisement

ಪ್ರಕರಣದ ತನಿಖೆ ಸಂಬಂಧ ನಾಗ್ಪುರ ಠಾಣೆ ಪೊಲೀಸರು ಉಗ್ರ ಅಕ್ಬರ್​ ಪಾಷಾನನ್ನು ಬಾಡಿ ವಾರೆಂಟ್​ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಮತ್ತು ಅಕ್ಬರ್ ಪಾಷ್ ನಡುವೆ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ನಂತರ ಇಬ್ಬರನ್ನು ವಿಚಾರಣೆ ಬಳಿಕ ಇದೀಗ ನಾಗ್ಪುರ ಪೊಲೀಸರು ಉಗ್ರ ಅಕ್ಬರ್​ ಪಾಷಾನನ್ನು ಮತ್ತೆ ಬೆಳಗಾವಿಗೆ ಶಿಫ್ಟ್​​ ಮಾಡಿದ್ದಾರೆ.

ಬೆಳಗಾವಿಯ ಇದೇ ಹಿಂಡಲಾಗ ಜೈಲಿಗೆ ಕೊಲೆ ಆರೋಪಿ ನಟ ದರ್ಶನ್​ ಮತ್ತು ಇತರರನ್ನು ಶಿಫ್ಟ್​ ಮಾಡುವ ಸಾಧ್ಯತೆ ಇದೆ. ದರ್ಶನ್​ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಬೇಕಾದರೆ ನ್ಯಾಯಾಲಯದ ಅನುಮತಿ ಅವಶ್ಯಕತೆ ಇದೆ. ಹೀಗಾಗಿ ಶಿಫ್ಟ್​ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ದರ್ಶನ್​ ಅವರ ಮೇಲೆ ಮತ್ತೆ ಎರಡು ಪ್ರಕರಣಗಳು ದಾಖಲಾಗಿವೆ.

 


Spread the love

LEAVE A REPLY

Please enter your comment!
Please enter your name here