HomeBengaluru Newsಮೈಸೂರು–ಶಿವಮೊಗ್ಗದಲ್ಲಿ ವಾಯುಮಾಲಿನ್ಯ ಏರಿಕೆ: ಬೆಂಗಳೂರನ್ನೂ ಮೀರಿದ AQI

ಮೈಸೂರು–ಶಿವಮೊಗ್ಗದಲ್ಲಿ ವಾಯುಮಾಲಿನ್ಯ ಏರಿಕೆ: ಬೆಂಗಳೂರನ್ನೂ ಮೀರಿದ AQI

For Dai;y Updates Join Our whatsapp Group

Spread the love

ಬೆಂಗಳೂರು: ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 154ರೊಂದಿಗೆ ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬರುತ್ತಿದೆ.

ಇಷ್ಟುದಿನ ಸಾಧಾರಣವಾಗಿದ್ದ ಮೈಸೂರು ಮತ್ತು ಶಿವಮೊಗ್ಗ ನಗರಗಳಲ್ಲಿ ಇಂದು ಏಕಾಏಕಿ ವಾಯುಮಾಲಿನ್ಯ ಹೆಚ್ಚಾಗಿ, AQI 172ಕ್ಕೆ ತಲುಪಿದ್ದು ಬೆಂಗಳೂರನ್ನೂ ಮೀರಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರಂತರ ನಿರ್ಮಾಣ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿ ಪರಿಣಮಿಸಿವೆ. ಇದರಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಕಣ್ಣು ಕೊರಕು, ಉಸಿರಾಟದ ತೊಂದರೆ ಮತ್ತು ಅಲರ್ಜಿಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ PM2.5 ಪ್ರಮಾಣ 62 ಹಾಗೂ PM10 ಪ್ರಮಾಣ 85 ದಾಖಲಾಗಿದೆ. PM10 ಎನ್ನುವುದು ಸೂಕ್ಷ್ಮ ಧೂಳಿನ ಕಣಗಳಾಗಿದ್ದು, PM2.5 ಮಾನವನ ಕೂದಲಿನ ದಪ್ಪದ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳು. ಇವು ಶ್ವಾಸಕೋಶದೊಳಗೆ ನೇರವಾಗಿ ಪ್ರವೇಶಿಸಿ ರಕ್ತದಲ್ಲಿ ಸೇರಿಕೊಳ್ಳುವ ಮೂಲಕ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಆದರೆ ಇಂದಿನ ದಿನ ಬೆಂಗಳೂರಿನಲ್ಲಿ ಈ ಕಣಗಳ ಪ್ರಮಾಣ ಹಿಂದಿನ ದಿನಗಳಿಗಿಂತ ಸ್ವಲ್ಪ ಕಡಿಮೆಯಿರುವುದು ಸ್ವಲ್ಪ ನಿಟ್ಟುಸಿರಿನ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಬೆಳಿಗ್ಗೆ ಮತ್ತು ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಅನಾವಶ್ಯಕ ಹೊರಾಟ ತಪ್ಪಿಸುವುದು, ಮನೆಯೊಳಗೆ ಗಿಡಗಳನ್ನು ಬೆಳೆಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ವಾಯುಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI:

ಬೆಂಗಳೂರು – 154
ಮಂಗಳೂರು – 153
ಮೈಸೂರು – 172
ಬೆಳಗಾವಿ – 101
ಕಲಬುರ್ಗಿ – 88
ಶಿವಮೊಗ್ಗ – 172
ಬಳ್ಳಾರಿ – 181
ಹುಬ್ಬಳ್ಳಿ – 75
ಉಡುಪಿ – 139
ವಿಜಯಪುರ – 107
ವಾಯು ಗುಣಮಟ್ಟದಲ್ಲಿ ಉಂಟಾಗುತ್ತಿರುವ ಈ ಏರಿಳಿತಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕ ಮೂಡಿಸುತ್ತಿದ್ದು, ಎಚ್ಚರಿಕೆಯಿಂದಿರಲು ತಜ್ಞರು ಮನವಿ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!