ಇಂದಿನ ಅವನ ಸ್ಥಿತಿಗೆ ಕುಡಿತದ ಚಟವೇ ಕಾರಣ: ಗುರುಪ್ರಸಾದ್ ಸಾವಿನ ಬಗ್ಗೆ ನಟ ಜಗ್ಗೇಶ್ ಹೇಳಿದ್ದಿಷ್ಟು!

0
Spread the love

ಬೆಂಗಳೂರು: ಇಂದಿನ ಅವನ ಸ್ಥಿತಿಗೆ ಕುಡಿತದ ಚಟವೇ ಕಾರಣ ಎಂದು ನಟ ಜಗ್ಗೇಶ್ ಹೇಳಿದ್ದಾರೆ.  ಗುರುಪ್ರಸಾದ್​ ಸಾವಿನ ಸುದ್ದಿ ಕೇಳಿ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಗುರುಪ್ರಸಾದ್ ಮೊದಲ ಹೆಂಡತಿಗೆ ನನ್ನ ಮೇಲೆ ಅಪಾರ ಗೌರವವಿತ್ತು. ನಿನ್ನ ತಪ್ಪುಗಳು ಆಕೆ ಕ್ಷಮಿಸುತ್ತಾಳೆ ಸಂಸಾರ ಸರಿ ಮಾಡಿಕೋ ಎಂದು ಗುರುಪ್ರಸಾದ್‌ಗೆ ತಿಳಿ ಹೇಳಿದ್ದೆ, 2ನೇ ಮದುವೆ ವಿಚಾರಕ್ಕೆ ಎರಡು ಮೆಟ್ಟಿನ ಏಟು ಹೊಡೆಯುತ್ತಾಳೆ ಅಷ್ಟೇ.

Advertisement

ನಾವು ಯಾವತ್ತು ದ್ವೇಷದಿಂದ ಸಾಯಬಾರದು. ಇಂದಿನ ಅವನ ಸ್ಥಿತಿಗೆ ಕುಡಿತದ ಚಟವೇ ಕಾರಣ ಎಂದಿದ್ದಾರೆ. ‘ಮಠ’ ಸಿನಿಮಾ ಮಾಡುವಾಗ ಆರಂಭ ದಿನದ ಗುರು ಅವರನ್ನು ನೆನಪಿಸಿಕೊಂಡ್ರೆ ಆಶಾವಾದಿ ಆಗಿದ್ದರು. ಹೀಗೆಲ್ಲಾ ಯಾಕೆ ಆಯ್ತು ಗೊತ್ತಿಲ್ಲ. ನಮ್ಮಿಬ್ಬೀರ ಜಗಳದ ನಂತರ ಅವರ ಸಹವಾಸಗಳು ಎಲ್ಲಾ ಜೇಂಜ್ ಆಯಿತು.

ಅವರ ಜೊತೆ ಕೆಲಸ ಮಾಡುತ್ತಿದ್ದ ಒಳ್ಳೆಯ ಕೆಲಸಗಾರರು ಬಿಟ್ಟು ಹೋದರು. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ತಬಲಾ ನಾಣಿ ಕೊಡುಗೆ ತುಂಬಾ ಇದೆ. ಅವರಿಗೆ ತುಂಬಾ ಸಹಕಾರ ನೀಡುತ್ತಿದ್ದರು. ಆ ನಂತರ ಎಲ್ಲರೂ ಬಿಟ್ಟು ಹೋದರು. ಇನ್ನೂ ‘ರಂಗನಾಯಕ’ ಸಿನಿಮಾ ಟೈಮ್‌ನಲ್ಲಿ ಕಾಲ್ ಮಾಡಿ ಕೆಟ್ಟದಾಗಿ ಬೈಯುತ್ತಿದ್ದರು. ನೀನು ಒಬ್ಬ ಹೀರೋನಾ ಎನ್ನುತ್ತಿದ್ದರು. ಅಲ್ಲಿಂದ ಒಡನಾಟ ಕಮ್ಮಿಯಾಯಿತು ಎಂದು ಜಗ್ಗೇಶ್ ವಿವರಿಸಿದರು.


Spread the love

LEAVE A REPLY

Please enter your comment!
Please enter your name here