ಸಿಪಿಸಿ 1ರಲ್ಲಿ ತಿದ್ದುಪಡಿ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನ್ಯಾಯಾಂಗದ ವ್ಯವಸ್ಥೆಯಲ್ಲಿ ಬಡವರಿಗೆ ಸಬಲತೆ ನೀಡುವಲ್ಲಿ ಸಿವಿಲ್ ಪ್ರಕಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಕಾಯ್ದೆ ದಿಟ್ಟ ಹೆಜ್ಜೆಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಕೆ.ಎಚ್ ಪಾಟೀಲ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ನಡೆದ ಸಿವಿಲ್ ಪ್ರಕಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಕಾಯ್ದೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಸುಮಾರು ವರ್ಷಗಳಿಂದ ಬಾಕಿ ಉಳಿದಿರುವ ವ್ಯಾಜ್ಯಗಳಿಂದ ನ್ಯಾಯಾಂಗ ವ್ಯವಸ್ಥೆ ಟೀಕೆಗೆ ಒಳಗಾಗಿದ್ದರೂ, ವಾಜ್ಯಗಳ ನಿಕಾಲೆ ಮಾಡುವ ಭಾವನೆ ಯಾರಲ್ಲೂ ಬರಲಿಲ್ಲ. ಆದರೆ ನಮ್ಮ ಸರ್ಕಾರದ ಮಹತ್ವದ ನಿರ್ಧಾರದಿಂದ ಬಡವರಿಗೆ ಶೀಘ್ರವಾಗಿ ನ್ಯಾಯ ಸಿಗಲಿದೆ ಎಂದರು.

ಸಕಾಲದಲ್ಲಿ ನ್ಯಾಯದಾನ ಮಾಡದೇ ತಡ ಮಾಡುವುದು ದ್ರೋಹ ಬಗೆಯುವುದಕ್ಕೆ ಸಮ ಎಂಬ ಮಾತಿದೆ. ಇದನ್ನು ಹೊಗಲಾಡಿಸಲು ಕಾಯ್ದೆಯ ಮೂಲಕ 2 ವರ್ಷದಲ್ಲಿ ಕೇಸ್ ನಿಕಾಲೆ ಆಗಲು ಸಿಪಿಸಿ 1ರಲ್ಲಿ ತಿದ್ದುಪಡಿ ಮಾಡಿದ್ದೇವೆ. ಸೆಕ್ಷನ್ 89ರಲ್ಲಿ ತಿದ್ದುಪಡಿ ಮೂಲಕ ರಾಜಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಡವರಿಗೆ ಶ್ರೀಘ್ರಗತಿಯಲ್ಲಿ ನ್ಯಾಯ ಒದಗಿಸಲು ಮತ್ತು ನ್ಯಾಯಾಲಯದ ಸಮಯಾವಕಾಶವನ್ನು ಉಳಿಸಿಲು ಈ ಕಾಯ್ದೆ ನೆರವಾಗಲಿದೆ.

– ನ್ಯಾ.ಮೂ ಅಶೋಕ್ ಬಿ.ಇಂಚಗೇರಿ.


Spread the love

LEAVE A REPLY

Please enter your comment!
Please enter your name here