`ಅಮ್ಮ ಫೌಂಡೇಶನ್’ ಕ್ಯಾಲೆಂಡರ್ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಬೆಂಗಳೂರಿನ ಸರಕಾರಿ ನೌಕರ ಭವನದಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿ ಜಗದೀಶ್ ಗಂಗಣ್ಣನವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಸೇವೆಯ ಉದ್ದೇಶವನ್ನಿಟ್ಟುಕೊಂಡು ಕಾರ್ಯಪ್ರವೃತ್ತರಾಗಿರುವುದು ಸಂತಸದ ವಿಚಾರ ಎಂದರು.

Advertisement

ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟೆ ಮಾತನಾಡುತ್ತಾ, ಫೌಂಡೇಶನ್ ವತಿಯಿಂದ ಸಮಾಜಕ್ಕೆ ಅನುಕೂಲಕರವಾದ ಕಾರ್ಯಗಳನ್ನು ಮಾಡಿ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ್ ಬಳ್ಳಾರಿ, ಟಿ.ಎಂ. ಮಂಜುನಾಥ್ ಮಾತನಾಡಿದರು. ಅಮ್ಮ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲರಾದ ಮೈಲಾರಪ್ಪ ಡಿ.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುರೇಶ್ ಹಾಳಕೇರಿ ಸ್ವಾಗತಿಸಿದರು. ಪರಶುರಾಮ್ ತಳವಾರ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ದಲಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ನಾಗರಹಳ್ಳಿ, ಬಸವರಾಜ್ ಲಾಲಿ, ಮಂಜುನಾಥ ನಿಡಗುಂದಿ, ಮಲ್ಲಿಕಾರ್ಜುನ್ ಪೂಜಾರ, ಬಸವರಾಜ್ ಪೂಜಾರ, ಸೌಮ್ಯ ಆರ್.ಸಿ, ಶರೀಫ ಡಿ.ಎಚ್, ಮಾರುತಿ ಜಿ.ಹೆಚ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here