ವಿಜಯಸಾಕ್ಷಿ ಸುದ್ದಿ, ಗದಗ: ಸೋಲಿಡಾರಿಟಿ ಯೂತ್ ಮೂವಮೆಂಟ್ ಗದಗ ಜಿಲ್ಲಾ ಘಟಕದ ವತಿಯಿಂದ `ಸಬಲ ಯುವಕರು-ಶುದ್ಧ ಮನಸ್ಸು, ಸುರಕ್ಷಿತ ಭವಿಷ್ಯ’ ಎಂಬ ವಿಷಯದ ಕುರಿತು ಗದಗ ನಗರದ ಇಂದಿರಾ ವನದಲ್ಲಿ ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗದಗ ಡಿ.ವೈ.ಎಸ್.ಪಿ ಮಹಾಂತೇಶ್ ಸಜ್ಜನ ಸೈಬರ್ ವಂಚನೆಯ ವಿವಿಧ ವಿಧಾನಗಳನ್ನು ವಿವರಿಸಿ, ಅದರಿಂದ ತಪ್ಪಿಸಿಕೊಳ್ಳುವ ಕುರಿತು ಮಹತ್ವದ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾದ ಖತೀಬ್ ವ ಇಮಾಮ ಜಮಾತ್ ಮಸ್ಜೀದ್ ಗದಗ ಮೌಲಾನಾ ಹುಸೇನ ಅಹ್ಮದ ಬಾಗಲಿ ಮಾದಕ ದ್ರವ್ಯ, ವ್ಯಸನಗಳಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ನಗರಸಭೆ ಸದಸ್ಯ ಜೂನಸಾಬ ನಮಾಜಿ ಉತ್ತಮ ನಾಯಕತ್ವ, ವ್ಯಕ್ತಿತ್ವ ಮತ್ತು ಜೀವನ ಶೈಲಿಯಲ್ಲಿ ಮೌಲ್ಯಾಧಾರಿತ ಬದಲಾವಣೆಯ ಅಗತ್ಯತೆಯನ್ನು ತಿಳಿಸಿದರು.
ಮುಖಂಡರಾದ ಮುನ್ನಾ ರಶ್ಮಿ, ಮುಲ್ಲಾ ಜಿಲ್ಲಾಧ್ಯಕ್ಷ ಮುಹಮ್ಮದ್ ಯೂಸುಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ ಮನ್ನಾನ ಕುರಾನ್ ಪಠಣ ನೆರವೇರಿಸಿದರು. ಹಿದಾಯತ್ & ಜೆ.ಯು ಸ್ಕೂಲ್ ಅಧ್ಯಕ್ಷ ಜುನೆದ್ ಉಮಚಗಿ, ಮಹಮ್ಮದ್ ರಿಯಾಜ್ ಶೇಖ್, ಕಾರ್ಯಕರ್ತರಾದ ಅಬ್ದುಲ್ ಹಫೀಜ್ ಉಮಚಗಿ, ಮುನ್ನಾ ಕಲ್ಮನಿ, ಆಕ್ಟರ್ ಅಲಿ ಆತ್ತಾರ, ಜಹೀರ್ ಅಹ್ಮದ್ ಔಸಂಗವಾಲೆ, ಜಾವೀದ ಉಮಚಗಿ, ಖಾಸಿಂ ದರ್ಗದ್, ಮೆಹಬೂಬ್ ಅಲಿ ರೋಣ, ಮುಹಮ್ಮದ್ ಫಹಿಮ್, ಸಮೀರ್ ಅಕ್ಕಿ, ವಸೀಮ್ ಅಹ್ಮದ್, ಪುರಖಾನ ಉಮಚಗಿ, ಸಾಧಿಕ್ ಧಾರವಾಡ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



