ಆನಂದ್ ಗುರೂಜಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್: ದಿವ್ಯಾ ವಸಂತ ಸೇರಿ ಇಬ್ಬರ ವಿರುದ್ಧ FIR ದಾಖಲು

0
Spread the love

ಬೆಂಗಳೂರು: ಇದು ಇಡೀ ರಾಜ್ಯವೇ ಖುಷಿಪಡುವ ವಿಚಾರ” ಎಂದು ಹೇಳುವ ಮೂಲಕ ಭಾರೀ ಟ್ರೋಲ್ ಗೆ ಒಳಗಾಗಿದ್ದ ಟಿವಿ ನಿರೂಪಕಿಯಾಗಿದ್ದ ದಿವ್ಯಾ ವಸಂತ್ ವಿರುದ್ಧ ಈ ಹಿಂದೆ ಹನಿಟ್ರ್ಯಾಪ್​ ಪ್ರಕರಣದಲ್ಲಿ ಬಂಧನವಾಗಿದ್ದಳು..

Advertisement

ಇದೀಗ ದಿವ್ಯಾ ವಸಂತ ವಿರುದ್ಧ ಖ್ಯಾತ ಜ್ಯೋತಿಷಿ ಮಹರ್ಷಿ ಡಾ. ಆನಂದ ಗುರೂಜಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ದಿವ್ಯಾ ಗ್ಯಾಂಗ್‌ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಈಗಾಗಲೇ ದಿವ್ಯಾ ವಸಂತ ಹಾಗೂ ತಂಡದ ಮೇಲೆ ವಂಚನೆ, ಬೆದರಿಕೆ ಕೇಸ್‌ ದಾಖಲಾಗಿವೆ. ಸದ್ಯ ಆನಂದ ಗುರೂಜಿ ಅವರು ತನ್ನ ಕುರಿತು ಅಶ್ಲೀಲ ವಿಚಾರ ಇದೆ ಎಂಬ ರೀತಿಯ ವಿಡಿಯೋವನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದಾರೆ.

ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್‌ ದೂರು ನೀಡಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ಸ್ವತಃ ಈ ಬಗ್ಗೆ ಪ್ರಕರಣ ದಾಖಲಿದ್ದು, ಪೊಲೀಸರು ಕೃಷ್ಣ ಮೂರ್ತಿ ಎಂಬುವವರನ್ನು ಆರೋಪಿ 1 ಹಾಗೂ ದಿವ್ಯಾ ವಸಂತ ಅವರನ್ನು ಆರೋಪಿ 2 ಮಾಡಿದ್ದಾರೆ.

ಈಗಾಗಲೇ ಆನಂದ ಗುರೂಜಿ ಅವರು ವಿಡಿಯೋ ಹಾಗೂ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ, ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೇ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಆನಂದ ಗುರೂಜಿ ದೂರಿನಲ್ಲಿ ಆರೋಪಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here