Crime News: 30 ಕುರಿಗಳಿಗಾಗಿ ವ್ಯಕ್ತಿ ಕೊಂದು ಎಸ್ಕೇಪ್ ಆಗಿದ್ದ ಪಾತಕಿ ಅಂದರ್!

0
Spread the love

ತುಮಕೂರು:- ವ್ಯಕ್ತಿಯನ್ನ ಬರ್ಬರವಾಗಿ ಕೊಂದು 30‌ ಮೇಕೆಗಳನ್ನ ಕದ್ದೊಯ್ದ ಪಾತಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ಜರುಗಿದೆ.

Advertisement

60 ವರ್ಷದ ನರಸಿಂಹಪ್ಪ ಕೊಲೆಯಾದ ವ್ಯಕ್ತಿ. ಮಣಿಕಂಠ ಎಂಬಾತನಿಂದ ದುಷ್ಕೃತ್ಯ ನಡೆದಿದೆ. 30ಮೇಕೆಗಳಿಗಾಗಿ ಮಚ್ಚಿನಿಂದ ಕುತ್ತಿಗೆಯನ್ನ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಆರೋಪಿ ಎಸ್ಕೆಎಫ್ ಆಗಿದ್ದ. ಕೊಲೆ ಬಳಿಕ 30 ಮೇಕೆಗಳನ್ನ ನಿನ್ನೆ(ಶನಿವಾರ) ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ್ದಾನೆ.

ಮೇಕೆ ಮತ್ತು ನರಸಿಂಹಪ್ಪ ಮನೆಗೆ ಬಾರದಿದ್ದಕ್ಕೆ ಅನುಮಾನದಿಂದ ಹಿರಿಯೂರು ಸಂತೆಯಲ್ಲಿ ನರಸಿಂಹಪ್ಪ ಪುತ್ರ ಚೆಕ್ ಮಾಡಿದ್ದರು. ಈ ವೇಳೆ ಮೇಕೆಗಳ ಸಮೇತ ಸಂತೆಯಲ್ಲಿ ಮಣಿಕಂಠ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಮಣಿಕಂಠನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ವೇಳೆ ಮೇಕೆಗಳಿಗಾಗಿ ಕೊಲೆ ಮಾಡಿರುವುದಾಗಿ ಮಣಿಕಂಠ ಬಾಯಿ ಬಿಟ್ಟಿದ್ದಾನೆ. ಅರಣ್ಯ ಪ್ರದೇಶಕ್ಕೆ ಕೊರೆದೊಯ್ದು ಕೊಲೆ ಮಾಡಿ‌ ಎಸೆದಿದ್ದ ಮೃತ ದೇಹವನ್ನ ಮಣಿಕಂಠ ತೋರಿಸಿದ್ದಾನೆ.

ಇದೀಗ ಅರಸಿಕೆರೆ ಪೊಲೀಸರು ಆರೋಪಿ ಮಣಿಕಂಠನನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here