ಲಕ್ಷ್ಮೇಶ್ವರ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಗರದ ಅಂಜುಮನ್ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು ಬೆಂಬಲ ಸೂಚಿಸಿ ಅವರ ಅಹವಾಲು ಸ್ವೀಕರಿಸಿದರು. ಅಧ್ಯಕ್ಷರಾದ ತಾಜುದ್ದೀನ ಕಿಂಡ್ರಿ ಮಾತನಾಡಿ, ಪೌರ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ನಿಮ್ಮ ಮನವಿಯನ್ನು ಸಚಿವರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎ.ಡಿ. ಮುಜಾವರ, ಹೈದರ ಖವಾಸ, ಮುನ್ನಾ ಢಾಲಾಯತ, ದಾವೂದ ಜಮಾಲ್, ದಾವಲಸಾಬ ಲಕ್ಷ್ಮೇಶ್ವರ ಹಾಜರಿದ್ದರು.
Advertisement