ವಿಜಯಸಾಕ್ಷಿ ಸುದ್ದಿ, ಗದಗ : ಜಯ ಕರ್ನಾಟಕ ಜನಪರ ವೇದಿಕೆ ಸ್ಥಾಪನೆಗೊಂಡು ಮೂರು ವರ್ಷಗಳು ಪೂರೈಸಿ ನಾಲ್ಕನೇ ವರ್ಷದ ವಸಂತಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಶಿರಹಟ್ಟಿಯ ಬೆಳ್ಳಟ್ಟಿ ಗ್ರಾಮದ ಶ್ರೀ ರೇಣುಕಾದೇವಿ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ವಾರ್ಷಿಕೋತ್ಸವ ಆಚರಿಸಲಾಯಿತು.
ಗದಗ ಜಿಲ್ಲಾಧ್ಯಕ್ಷ ಸದಾನಂದ ನಂದನವರ್ ಮಾತನಾಡಿ, ನಮ್ಮ ಸಂಘಟನೆಯು ನೊಂದವರ ಧ್ವನಿಯಾಗಿ ಅವರು ಕಣ್ಣೀರನ್ನು ಒರೆಸುವ ಶಕ್ತಿಯಾಗಿ ಮುನ್ನಡೆಯಲಿದೆ ಎಂದರು. ಶಿರಹಟ್ಟಿ ತಾಲೂಕಾಧ್ಯಕ್ಷ ಸಣ್ಣಯಲಪ್ಪ ಒಳಗೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ರಮೇಶ್ ಲಮಾಣಿ, ಮನಸೂರ ಅಹ್ಮದ ಎಮ್.ಗಾಡಗೋಳಿ, ರಾಜಭಕ್ಷಿ ನದಾಫ್, ನಾಗರಾಜ್ ಹಮ್ಮಗಿ, ಸಂತೋಷ್ ವಡ್ಡರ್, ಕಿರಣ್ ಪಾಟೀಲ್, ವೆಂಕಟೇಶ್ ಅರೆಗನೂರ್, ಹನುಮಂತ್ ಒಳಗೇರಿ, ಲಕ್ಷ್ಮಣ್ ಒಡವಿ, ವೆಂಕಟೇಶ್ ಬಂಡಿವಡ್ಡರ್, ಹನುಮಂತ ಬೈಲಾಪುರ್, ಕಿರಣ್ ಬಂಡಿವಡ್ಡರ್, ನಾಗರಾಜ್ ದೇವಾಳ್, ಸಂತೋಷ್ ಕರ್ಮಿಟ್ಟಿ, ಗಿರೀಶ್ ವಿನಾಳ, ನವೀನ್ ಹಮ್ಮಿಗಿ, ವಿಠಲ ಹಮ್ಮಿಗಿ, ಕೃಷ್ಣ ಕಲೆವಡ್ಡರ್, ಪ್ರವೀಣ್ ಬಾಲ್ಯಹಸೂರ್, ಅರುಣ್ ಬಂಡಿವಡ್ಡರ್, ರವಿ ಕಲ್ಮನಿ, ರಮೇಶ್ ದೇವಾರ್, ಪ್ರಶಾಂತ್ ಬಂಡಿವಡ್ಡರ್, ಪ್ರಶಾಂತ್, ಆನಂದ್, ನರಸಿಂಹ, ಮಹೇಶ್, ಫಕ್ಕೀರೇಶ, ವೆಂಕಟೇಶ್, ಭೀಮೇಶ್, ಮಂಜು ಕುಮಾರ್, ಆನಂದ್, ಸುರೇಶ್, ಅರುಣ್, ಮುದುಕಪ್ಪ, ಪ್ರಕಾಶ್, ಹರೀಶ್, ಪ್ರಶಾಂತ್, ಚನ್ನಬಸಪ್ಪ ಮೋಡೂರ್ ಮುಂತಾದವರಿದ್ದರು.