ಬಿಗ್ ಬಾಸ್ 15 ರಲ್ಲಿ ಪ್ರೇಮ ಪಕ್ಷಿಗಳಾಗಿ ಹಾರಾಡಿದ್ದ ನಟಿ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಬಳಿಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತೇಜಸ್ವಿ ಹಾಗೂ ಕರಣ್ ಮದುವೆಯಾಗುತ್ತಿರುವ ಸುದ್ದಿಯನ್ನು ಸ್ವತಃ ತೇಜಸ್ವಿ ತಾಯಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ತೇಜಸ್ವಿ ತಾಯಿಯೊಂದಿಗೆ ‘ಸೆಲೆಬ್ರಿಟಿ ಮಾಸ್ಟರ್ ಶೆಫ್ ಶೋ’ಗೆ ಆಗಮಿಸಿದ್ದರು. ಈ ವೇಳೆ, ನಿರೂಪಕಿ ಮಗಳ ಮದುವೆ ಯಾವಾಗ? ಎಂದು ತೇಜಸ್ವಿ ತಾಯಿಗೆ ಕೇಳಿದ್ದಾರೆ. ಆಗ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ ಎಂದು ತಿಳಿಸಿದ್ದಾರೆ. ತಾಯಿಯ ಮಾತು ಕೇಳಿ ನಟಿ ತೇಜಸ್ವಿ ನಾಚಿ ನೀರಾಗಿದ್ದಾರೆ.
ಇನ್ನೂ ಈ ಹಿಂದೆ ತೇಜಸ್ವಿ ಅವರು ಕರಣ್ ಕುಂದ್ರಾ ಜೊತೆ ಕೋರ್ಟ್ ಮ್ಯಾರೇಜ್ ಆಗೋದಾಗಿ ಹೇಳಿದ್ದರು. ಸರಳ ಮದುವೆ ಆಗುವ ಬಗ್ಗೆ ತಿಳಿಸಿದ್ದರು.
ಇನ್ನೂ 2021ರ ‘ಬಿಗ್ ಬಾಸ್ ಹಿಂದಿ 15’ರಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ಸ್ಪರ್ಧಿಗಳಾಗಿದ್ದರು. ಈ ಶೋನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಯಿತು. ಈಗ ಕಳೆದ 4 ವರ್ಷಗಳಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದ ಜೋಡಿಗಳು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಹಿಂದಿ 15’ರಲ್ಲಿ ತೇಜಸ್ವಿ ವಿನ್ನರ್ ಆಗಿದ್ದರು.