ನಟ ದರ್ಶನ್ʼಗೆ ಮತ್ತೊಂದು ಸಂಕಷ್ಟ: ಕೊಲೆ ನಡೆದ ಸ್ಥಳದಲ್ಲಿ ಪೋಸ್ ನೀಡಿದ ಪೋಟೋಗಳು ವೈರಲ್!

0
Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಪೂರ್ಣಗೊಳಿಸಿರೋ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಸಿಹೆಚ್ 57 ನೇ ನ್ಯಾಯಾಲಯಕ್ಕೆ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯಲ್ಲಿರುವ ದರ್ಶನ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಪೋಟೊ ರಹಸ್ಯ ಬೆಳಕಿಗೆ ಬಂದಿದೆ..ಸಾಕ್ಷಿದಾರನಾಗಿರುವ ಪುನೀತ್ ಮೊಬೈಲ್ ನಲ್ಲಿ ಡಿಲೀಟ್ ಆಗಿದ್ದ ಪೋಟೊಗಳು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ..

Advertisement

ಹೌದು ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಸಾಕ್ಷಿದಾರನ ಮೊಬೈಲ್​ನಿಂದ ಫೋಟೋಗಳನ್ನು ರಿಟ್ರೀವ್ ಮಾಡಿದ್ದಾರೆ. ರಿಲೀಸ್​ ಆದ ಫೋಟೋದಲ್ಲಿ ದರ್ಶನ್​ ರೇಣುಕಾಸ್ವಾಮಿ ಕೇಸ್​ನಲ್ಲಿ A6 ಆರೋಪಿಯಾಗಿ ಕಿಡ್ನಾಪರ್ ಜಗದೀಶ್, A7 ಅನುಕುಮಾರ್ ಹಾಗೂ A8- ಕಾರು ಚಾಲಕ ರವಿ ಇದ್ದಾರೆ. ಸದ್ಯ ಇದೇ ತಿಂಗಳ 26 ಕ್ಕೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಿಗದಿಯಾಗಿದೆ. ರೆಗ್ಯೂಲರ್ ಬೇಲ್ ಸಿಗುತ್ತಾ.? ಇಲ್ಲ ಆರುವಾರಗಳ ಬಳಿಕ ಬಳ್ಳಾರಿ ‌ಜೈಲಿಗೆ ಹೋಗ್ತಾರ ಕಾದು ನೋಡಬೇಕು.


Spread the love

LEAVE A REPLY

Please enter your comment!
Please enter your name here