ಮುದ್ದುಲಕ್ಷ್ಮಿ ಸೇರಿದಂತೆ ಇನ್ನೂ ಹಲವು ಧಾರವಾಹಿಗಳಲ್ಲಿ ನಟಿಸಿರುವ ನಟ ಚರಿತ್ ಬಾಲಪ್ಪ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಸುಲಿಗೆ ಹಾಗೂ ಬ್ಲ್ಯಾಕ್ ಮೇಲೆ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಚರಿತ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ದೂರು ದಾಖಲಾಗಿತ್ತು.
ಚರಿತ್ ಬಾಲಪ್ಪ ಅಲಿಯಾಸ್ ಧ್ರುವಂತ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನ್ನ ಮೇಲೆ ದೂರು ದಾಖಲಾಗುತ್ತಿದ್ದಂತೆ ನಟ ಚರಿತ್ ಎಸ್ಕೇಪ್ ಆಗಿದ್ದಾರೆ.
ಬ್ಲಾಕ್ಮೇಲ್ ಮಾಡಿ ಹಣ ಸುಲಿಗೆ, ಲೈಂಗಿಕ ಕಿರುಕುಳ ನೀಡಿದ್ದಾಗಿ ಮಹಿಳೆ ದೂರು ನೀಡಿದ್ದಾರೆ. ಈ ಹಿಂದೆಯೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ನಟ ಜೈಲು ಸೇರಿ ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ ಬಳಿಕವು ಚರಿತ್ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆ.
ಧಾರಾವಾಹಿ ಶೂಟಿಂಗ್ ನೋಡಲು ಬಂದಿದ್ದ ಮಹಿಳೆಯೊಟ್ಟಿಗೆ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ಆ ನಂತರ ಬೇರೆಯವರೊಂದಿಗೆ ಮದುವೆ ಆಗಿದ್ದನಂತೆ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ. ಅದಾದ ಬಳಿಕ ಯುವತಿ, ಚರಿತ್ನಿಂದ ದೂರವೇ ಉಳಿದಿದ್ದರು. ಆದರೆ ಮದುವೆ ಆದ ಬಳಿಕವೂ ಸಹ ಈ ಯುವತಿಯ ಸಂಪರ್ಕ ಬೆಳೆಸಿ, ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡುತ್ತಿದ್ದನಂತೆ. ಅದಾದ ಬಳಿಕ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ಗಲಾಟೆ ಸಹ ಮಾಡಿದ್ದಾರೆ ಎಂದು ಸಂತ್ರಸ್ಥೆ ದೂರು ನೀಡಿದ್ದಾರೆ.
ಸಂತ್ರಸ್ಥೆ ದೂರು ನೀಡಿದ ಬಳಿಕ ಚರಿತ್ ನನ್ನು ಠಾಣೆಗೆ ಕರೆಸಿದ ಪೊಲೀಸರು ವಾರ್ನ್ ಮಾಡಿದ್ದಾರೆ. ಆ ಬಳಿಕ ಸಂತ್ರಸ್ತೆ ತಂಟೆಗೆ ಹೋಗಲ್ಲ ಎಂದು ಚರಿತ್ ಅಪಾಲಜಿ ಬರೆದುಕೊಟ್ಟಿದ್ದ. ಬಳಿಕ ಎರಡು ವರ್ಷ ಸಂತ್ರಸ್ತ ಮಹಿಳೆ ತಂಟೆಗೆ ಹೋಗಿರಲಿಲ್ಲ, ಆದರೆ 2022ರಲ್ಲಿ ಆತನ ಹೆಂಡತಿಯೊಂದಿಗೆ ಡಿವೋರ್ಸ್ ಪಡೆದ ಬಳಿಕ ಮತ್ತೆ ಸಂತ್ರಸ್ತೆಯನ್ನು ಭೇಟಿ ಮಾಡಿ ಪುನಃ ಪ್ರೀತಿಸುವಂತೆ, ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಬಲವಂತ ಮಾಡಿದ್ದ. ಆದರೆ ಸಂತ್ರಸ್ತೆ ಒಪ್ಪದ ಕಾರಣ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಸಹ ಮಾಡಿದ್ದನಂತೆ.
ಮರ್ಯಾದೆಗೆ ಹೆದರಿದ ಯುವತಿ ತನ್ನ ಬಳಿ ಇದ್ದ ಹಣ, ಚಿನ್ನ, ಬೆಳ್ಳಿಯ ಆಭರಣ, 23 ಕಂಚಿ ರೇಷ್ಮೆ ಸೀರೆಗಳನ್ನು ಚರಿತ್ಗೆ ನೀಡಿದ್ದರು. ಆದರೂ ತನ್ನ ವರ್ತನೆ ಬದಲಾಯಿಸಿಕೊಳ್ಳದೆ ಯುವತಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾನೆ. ಕೊನೆಗೆ ಯುವತಿ ಚರಿತ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.